Advertisement
ಇದನ್ನೂ ಓದಿ:Heart Attack: ಕ್ರಿಕೆಟ್ ಆಡುವ ವೇಳೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು
Related Articles
Advertisement
ಆತ್ಮಹತ್ಯೆಗೆ ಯತ್ನ:
ಗೋವಾದ ಅಪಾರ್ಟ್ ಮೆಂಟ್ ನಲ್ಲಿ ಮಗುವನ್ನು ಹತ್ಯೆಗೈದ ನಂತರ ಸುಚನಾ ಸೇಠ್ ಆತ್ಮಹತ್ಯೆಗೆ ಯತ್ನಿಸಿದ್ದಳು. ಬ್ಲೇಡ್ ಉಪಯೋಗಿಸಿ ಸುಚನಾ ಮಣಿಕಟ್ಟನ್ನು ಕತ್ತರಿಸಿಕೊಳ್ಳಲು ಯತ್ನಿಸಿದ್ದು, ನೆಲದ ಮೇಲೆ ಬಿದ್ದ ರಕ್ತದ ಸ್ಯಾಂಪಲ್ ಅನ್ನು ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ವಿಚಾರಣೆಯಲ್ಲಿ ಸುಚನಾ ಸೇಠ್, ತಾನು ಮಗುವನ್ನು ಕೊಂದಿಲ್ಲ ಎಂದು ತಿಳಿಸಿದ್ದು, ಮಗು ಹೇಗೆ ಸಾವನ್ನಪ್ಪಿತ್ತು ಎಂಬುದೇ ತನಗೆ ತಿಳಿದಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಂಡ-ಹೆಂಡತಿ ನಡುವೆ ವಿರಸ:
ಸುಚನಾ ಸೇಠ್ 2010ರಲ್ಲಿ ವೆಂಕಟರಾಮನ್ ಎಂಬವರ ಜತೆ ವಿವಾಹವಾಗಿದ್ದಳು. 2019ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಪತಿ ವೆಂಕಟರಾಮನ್ ಹೇಳಿಕೆ ಪ್ರಕಾರ, ಮಗುವಿನ ಜನನದ ನಂತರ ಸುಚನಾ ಜಗಳವಾಡುವುದು ಹೆಚ್ಚಳವಾಗಿತ್ತು. ಬಳಿಕ ಇಬ್ಬರು ವಿಚ್ಛೇದಿತರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಬ್ಬರು ದೂರವಾಗಿದ್ದರು.
ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಪ್ರಕ್ರಿಯೆಯಲ್ಲಿ ಇರುವಾಗಲೇ, ಪ್ರತಿ ಭಾನುವಾರ ಮಗುವನ್ನು ತಂದೆಯ ವಶಕ್ಕೆ ನೀಡಬೇಕೆಂದು ಫ್ಯಾಮಿಲಿ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಕಳೆದ ಐದು ವಾರಗಳಿಂದ ಆಕೆ ಮಗುವನ್ನು ನೋಡಲು ಅವಕಾಶ ನೀಡಿರಲಿಲ್ಲ. ಬಹುಶಃ ಆಕೆ ಮಗನ ಜೊತೆ ವೀಕೆಂಡ್ ಗಾಗಿ ಗೋವಾಕ್ಕೆ ತೆರಳಿರಬಹುದು ಎಂದು ನಂಬಿದ್ದೇವು ಎಂದು ಪತಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.