Advertisement

ನವಜಾಶ ಶಿಶುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

03:59 PM Jun 16, 2021 | Team Udayavani |

ಹಳ್ಳೂರ: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ನಾಲ್ಕು ದಿನದ ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Advertisement

ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಸರುವಾಸಿಯಾದ ವೆಂಕಟೇಶ್‌ ಆಸ್ಪತ್ರೆ (ಕನಕರೆಡ್ಡಿ)ಯಲ್ಲಿ 4 ದಿನದ ನವಜಾತ ಶಿಶುವಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮಗುವಿನ ಪ್ರಾಣ ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಅರಳಿಮಟ್ಟಿ ಗ್ರಾಮದ ಸಂಗೀತಾ ಪಾಟೀಲ ಎಂಬುವರ ಗಂಡು ಮಗು ಹುಟ್ಟಿದಾಗಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಹಾಲಿಂಗಪುರ ನಗರದ ಮಕ್ಕಳ ತಜ್ಞ ಡಾ.ರಮೇಶ ಪತ್ತಾರ ಎಂಬುವರು ಪರೀಕ್ಷಿಸಿದಾಗ ಮಗುವಿಗೆ ಉಸಿರಾಟದ ಕಾಯಿಲೆ ಇರುವುದು ಪತ್ತೆಯಾಗಿದೆ. ನವಜಾತ ಶಿಶುವಿನ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಮಾರುತಿ ಮೇದಾರ, ಅರವಳಿಕೆ ತಜ್ಞ ಡಾ.ಸಂಜಯ ಮುರಗೋಡ ಸೇರಿ ಅತೀ ಸೂಕ್ಷ್ಮ ಮತ್ತು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡಿ ಮಗುವಿನ ಪ್ರಾಣ ಉಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next