Advertisement

ನಿರಂತರ ಶ್ರಮದಿಂದ ಯಶಸ್ಸು

05:35 PM Feb 05, 2022 | Team Udayavani |

ಇಂಡಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ನಿತ್ಯವು ನಿರಂತರ ಶ್ರಮ, ಸತತ ಅಧ್ಯಯನ,ವಿಷಯಗಳಲ್ಲಿ ಆಯ್ಕೆ ಮಾಡಿಕೊಂಡು ಅಧ್ಯಯನ ಜೊತೆಗೆ ಶೀಘ್ರ ಬರವಣಿಗೆ ಸಹ ಬೇಕೆಂದು ಪಿಎಸೈ ಹುದ್ದೆಗೆ ಇತ್ತೀಚೆಗೆ ಆಯ್ಕೆಯಾದ ಇಂಡಿ ತಾಲೂಕಿನ ಬಬಲಾದ ಗ್ರಾಮದ ಶ್ರೀಕಾಂತ ಪೂಜಾರಿ ಹೇಳಿದರು.

Advertisement

ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಆಡಳಿತ ಮಂಡಳಿತ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡು ಬಾರಿ ಪಿಎಸೈ ಹುದ್ದೆಗೆ ಸ್ಪರ್ಧೆ ಮಾಡಿದ್ದೆ. ಆದರೆ ಕೆಲವೇ ಅಂಕಗಳು ಕಡಿಮೆಯಾಗಿ ಆಯ್ಕೆಯಾಗಲಿಲ್ಲ. ಆದರೂ ನಾನು ಧೈರ್ಯ ಬಿಡಲಿಲ್ಲ. ಪ್ರಯತ್ನಿಸೋಣ ಎಂದು ಸತತವಾಗಿ ಓದು ಹಾಗೂ ವ್ಯಾಯಾಮ ಮಾಡುವಲ್ಲಿ ನಿರತನಾದೆ. ನನ್ನ ಮನೆಯವರೆಲ್ಲ ಓದಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಹೀಗಾಗಿ ನಾನು ಸತತ ಪರಿಶ್ರಮಪಟ್ಟು ಓದಿದ ಪರಿಣಾಮವೇ ನಾನು ಪಿಎಸೈ ಆಗಲು ಕಾರಣವಾಯಿತು ಎಂದರು.

ಅಕ್ಕಮಹಾದೇವಿ ಸೌಹಾರ್ದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ಶಿವಾನಂದ ಚಾಳಿಕಾರ, ಯಲಗೊಂಡ ಪೂಜಾರಿ, ಚಂದ್ರಾಮ ಮೇಡೇದಾರ, ಶ್ರೀಕಾಂತ ಗಡಗಲಿ, ಸಚಿನ ಮೇಡೆದಾರ, ರೇವಣಸಿದ್ದ ಪೂಜಾರಿ, ಮಲಕಾರಿ ಪೂಜಾರಿ, ರಾಜು ನಾಯ್ಕೊಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next