Advertisement
ಶನಿವಾರ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ನಗರ ಠಾಣಾ ಮಹಿಳಾ ಎಸ್ಐ ಓಮನಾ ಮಾತನಾಡಿ, ಶಿಸ್ತನ್ನು ಅಳವಡಿಸಿಕೊಂಡು ಬೆಳೆಯುವ ವಿದ್ಯಾರ್ಥಿಗಳಲ್ಲಿ ತಪ್ಪು, ಸರಿಗಳನ್ನು ವಿವೇಚಿಸುವ ಗುಣ ಇರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಧೈರ್ಯ, ಸಾಹಸ ಪ್ರವೃತ್ತಿ, ಶಿಸ್ತು ಅಳವಡಿಸಿಕೊಂಡು ದೇಶ ಕಟ್ಟುವಲ್ಲಿ ತಮ್ಮದೇ ಪಾಲು ನೀಡಬೇಕು ಎಂದರು.
Related Articles
Advertisement
ನಗರ ಠಾಣಾ ಪ್ರೊಬೆಷನರಿ ಪಿಎಸ್ಐ ರಾಜ್ಕುಮಾರ್, ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್, ಎನ್ಸಿಸಿ ಅಧಿಕಾರಿ, ಎಸ್ಪಿಸಿಯ ಎಡಿ ವಸಂತ, ಶಾಲಾ ಎನ್ಸಿಸಿ ಅಧಿಕಾರಿ ಗ್ರೆಗೋರಿ ಶುಭಹಾರೈಸಿದರು.
ಉಪ ಪ್ರಾಂಶುಪಾಲೆ ಮರ್ಸಿ ಮಮತಾ, ಲೋನಿ ಪಾಯಸ್ ಉಪಸ್ಥಿತರಿದ್ದರು. ಸ್ಟೂಡೆಂಟ್ ಪೊಲೀಸ್ ಕೆಡೆಟ್ನ ಸಿಪಿಒ ಗೀತಾಮಣಿ ಸ್ವಾಗತಿಸಿ, ಚಿತ್ರಕಲಾ ಶಿಕ್ಷಕ ಜಗನ್ನಾಥ ವಂದಿಸಿದರು. ಮಮತಾ ರೈ ನಿರೂಪಿಸಿದರು.
ಕಿಟ್ ವಿತರಣೆಉಪ ಪ್ರಾಂಶುಪಾಲೆ ಮರ್ಸಿ ಮಮತಾ ಹಾಗೂ ಎಸ್ಪಿಸಿ ಸಿಪಿಒ ಗೀತಾಮಣಿ ಅವರಿಗೆ ಪೊಲೀಸ್ ಇಲಾಖೆಯಿಂದ ನೀಡಿದ ಕಿಟ್ ಅನ್ನು ವಿತರಿಸಲಾಯಿತು. ಆಕರ್ಷಕ ಪಥ ಸಂಚಲನ
ಕಾರ್ಯಕ್ರಮದ ಮೊದಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ನ ಸದಸ್ಯರು ಸಮವಸ್ತ್ರ ಧರಿಸಿ ಶಾಲಾ ಆವರಣದಿಂದ ಅತಿಥಿಗಳನ್ನು ಆಕರ್ಷಕ ಪಥಸಂಚಲನದ ಮೂಲಕ ಸ್ವಾಗತಿಸಿ ಕರೆತಂದರು.