Advertisement

ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿ ಏರಿಕೆ

02:23 AM Jun 17, 2021 | Team Udayavani |

ಹೊಸದಿಲ್ಲಿ : ದೇಶದಲ್ಲಿ ಬಹಳಷ್ಟು ರೈತರು ಉಪಯೋಗಿಸುವ ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಏರಿಕೆ ಮಾಡಿದೆ.

Advertisement

ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ. 140ರಷ್ಟು ಏರಿಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ನಿರ್ಧಾರ ತೆಗೆದುಕೊಂಡಿತು.

ಈ ನಿರ್ಧಾರದಿಂದಾಗಿ ರೈತರಿಗೆ ಪ್ರತೀ ಬ್ಯಾಗ್‌ ಡಿಎಪಿ ಹಳೇ ದರ ಅಂದರೆ 1,200 ರೂ.ಗಳಿಗೇ ಸಿಗಲಿದೆ. ಪ್ರತೀ ಚೀಲ 50 ಕೆಜಿ ಇರಲಿದೆ. ಈ ಮೊದಲು ಡಿಎಪಿ ಮೇಲಿನ ಸಬ್ಸಿಡಿ ಪ್ರತಿ ಬ್ಯಾಗ್‌ಗೆ 500 ರೂ.ಗಳಿತ್ತು. ಆದರೆ ರಸಗೊಬ್ಬರ ಕಂಪೆನಿಗಳು ದರ ಏರಿಕೆ ಮಾಡಿದ್ದರಿಂದ ಡಿಎಪಿ ದರವೂ ಹೆಚ್ಚಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಸಬ್ಸಿಡಿಯನ್ನು 500ರಿಂದ 1,200 ರೂ.ಗಳಿಗೆ ಏರಿಸಿದೆ. ಈ ನಿರ್ಧಾರದಿಂದಾಗಿ ಬೊಕ್ಕಸಕ್ಕೆ 14,775 ರೂ. ಹೊರೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next