Advertisement

ಶಿರಸಿ ತಾಲೂಕು‌ ಕನ್ನಡ ಸಾಹಿತ್ಯ‌ ಪರಿಷತ್ ಅಧ್ಯಕ್ಷರಾಗಿ ಜಿ.ಸುಬ್ರಾಯ ಭಟ್ ಬಕ್ಕಳ ಆಯ್ಕೆ

06:11 PM Feb 08, 2022 | Team Udayavani |

ಶಿರಸಿ : ಶಿರಸಿ ತಾಲೂಕು‌ ಕನ್ನಡ ಸಾಹಿತ್ಯ‌ ಪರಿಷತ್ ನೂತನ ಅಧ್ಯಕ್ಷರಾಗಿ ಜಿ.ಸುಬ್ರಾಯ ಭಟ್ಟ ಬಕ್ಕಳ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Advertisement

ಸುಮುಖ ಟಿವಿ‌ಪ್ರಧಾನ ಸಂಪಾದಕರಾಗಿ, ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾಗಿ, ಗಝಲ್ ಕವಿಯಾಗಿ, ಕೃಷಿಕರಾಗಿ ತೊಡಗಿಕೊಂಡ ಸುಬ್ರಾಯ ಭಟ್ಟ ಅವರು ಇದೀಗ ಕಸಾಪಕ್ಕೆ ಹೆಗಲು‌ ನೀಡಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಕಾರ್ಯ ಮಾಡಿದ್ದಾರೆ. ಜನಮಾಧ್ಯಮ, ಉಳುಮೆ, ಉದ್ಯಮದರ್ಶಿ ಸಂಪಾದಕರಾಗಿ, ಆಮಲಕ ಉತ್ಪನ್ನದವ ತಯಾರಕರಾಗಿ, ಬಕುಲ ಸಾಹಿತ್ಯ ಪ್ರತಿಷ್ಠಾನದ ಸ್ಥಾಪಕರಾಗಿ ಬಹುಮುಖಿಯಾಗಿ‌ಕಾರ್ಯ ಮಾಡಿದ್ದರು. ಮಾಧ್ಯಮ ಅಕಾಡೆಮಿ ಸದಸ್ಯರೂ ಆಗಿದ್ದ ಇವರು ಈಗ ತಾಲೂಕು ಸಾಹಿತ್ಯ ಪರಿಷತ್ ತೇರು ಎಳೆಯಲಿದ್ದಾರೆ ಎಂಬುದುಬು ಉಲ್ಲೇಖನೀಯ.

ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಜಿಲ್ಲಾ ಘಟಕಕ್ಕೆ ವೆಂಕಟೇಶ ನಾಯ್ಕ ಕೂಡ ಆಯ್ಕೆ ಆಗಿದ್ದಾರೆ ಎಂದು‌ ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ವಾಸರೆ ತಿಳಿಸಿದ್ದಾರೆ.

ಇದನ್ನೂ ಓದಿ : ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next