Advertisement

ಸುಬ್ರಹ್ಮಣ್ಯ: ಠಾಣೆ ಮೆಟ್ಟಿಲೇರಿದ ಶಿಕ್ಷಕರ ಗಲಾಟೆ

07:00 AM Feb 10, 2018 | Team Udayavani |

ಸುಬ್ರಹ್ಮಣ್ಯ: ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಮುಖ್ಯ ಶಿಕ್ಷಕಿಯನ್ನು ಖಾಸಗಿ ಶಾಲೆಯ ದೈ.ಶಿ. ಶಿಕ್ಷಕ ನೋರ್ವ ಎಳೆದೊಯ್ದಿದ್ದಾರೆ ಎಂದು ಆರೋಪಿಸಿ  ಸುಬ್ರ ಹ್ಮಣ್ಯ ಠಾಣೆಯಲ್ಲಿ ಫೆ.9ರಂದು ದೂರು ದಾಖಲಾಗಿದೆ.

Advertisement

ಮೂಲತಃ ಉಡುಪಿಯವರಾದ, ಸ್ಥಳೀಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಗುತ್ತಿಗಾರು ಛತ್ರಪ್ಪಾಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇದೇ ಕಟ್ಟಡದಲ್ಲಿ  ಸರಕಾರಿ ಶಾಲೆಯ ಮತ್ತೋರ್ವ ಶಿಕ್ಷಕ ಕೂಡ ಬಾಡಿಗೆ ನೆಲೆಯಲ್ಲಿ ವಾಸವಿದ್ದರು. ಫೆ.8ರಂದು ರಾತ್ರಿ  ಶಿಕ್ಷಕಿ ವಾಸವಿದ್ದ ಕೊಠಡಿಯಲ್ಲಿ ಪಕ್ಕದ  ಶಿಕ್ಷಕ ಇರುವುದನ್ನು ಗಮನಿಸಿದ ಕೊಠಡಿ ಮಾಲಕನ ಸಹೋದರ ಖಾಸಗಿ ದೈ.ಶಿ.ಶಿಕ್ಷಕ ಮಾಯಿಲಪ್ಪ ಅವರು ಶಿಕ್ಷಕ-ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. 

ಮರುದಿನ ಮುಖ್ಯ ಶಿಕ್ಷಕಿ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ ಮೇರೆಗೆ ಮನೆಯವರು ಬಂದು ಮುಖ್ಯ ಶಿಕ್ಷಕಿ-ಶಿಕ್ಷಕನ ಜತೆ ಠಾಣೆಗೆ ತೆರಳಿ ಮಾಯಿಲಪ್ಪರ ವಿರುದ್ಧ ದೂರು ನೀಡಿದ್ದರು. ಶಿಕ್ಷಣಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿದ್ದಾಗ ಮಾಯಿಲಪ್ಪ ಅವರು ತನ್ನ ಮೇಲೆ ಕೈ ಮಾಡಿ ಎಳೆದೊಯ್ದ ಕುರಿತು ದೂರು ನೀಡಿದ್ದರು. 

ಇದಕ್ಕೆ ಪ್ರತಿಯಾಗಿ ಮಾಯಿಲಪ್ಪರ ಪತ್ನಿ ಗ್ರಾ.ಪಂ. ಸದಸ್ಯೆ ಕೂಡ ಪ್ರತಿದೂರು ನೀಡಲು ಮುಂದಾದರು. ಠಾಣೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯ ಶಿಕ್ಷಕಿ ಅಸ್ವಸ್ಥಗೊಂಡಿದ್ದು, ಅವರಿಗೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಠಾಣಾಧಿಕಾರಿಗಳು ಎರಡೂ ಕಡೆಯವರ ನಡುವೆ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next