Advertisement

Subrahmanya ತಲವಾರು ಝಳಪಿಸಿದ ವದಂತಿ; ಸುಖಾಂತ್ಯ

12:41 AM Nov 11, 2023 | Team Udayavani |

ಸುಬ್ರಹ್ಮಣ್ಯ: ಕೇರಳ ನೋಂದಣಿಯ ಬೈಕ್‌ನಲ್ಲಿ ಮೂವರು ತಲವಾರು ಹಿಡಿದು ಹೋದರೆಂಬ ವದಂತಿ ಹರಿಹರ ಪಲ್ಲತಡ್ಕ ಗ್ರಾಮದೆಲ್ಲೆಡೆ ಹಬ್ಬಿ ಪೋಲೀಸರ ಆಗಮನದ ಬಳಿಕ ಪ್ರಕರಣ ಸುಖಾಂತ್ಯ ಕಂಡ ಘಟನೆ ಗುರುವಾರ ನಡೆದಿದೆ.

Advertisement

ಗುರುವಾರ ಕೇರಳ ನೋಂದಣಿ ದ್ವಿಚಕ್ರ ವಾಹನದಲ್ಲಿ ಮೂವರು ತಲವಾರು ಹಿಡಿದುಕೊಂಡು ಹೋಗಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ನೀಡಿದ್ದರು.

ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ, ಸಾರ್ವಜನಿಕರ ಸಹಾಯದಿಂದ ವ್ಯಕ್ತಿಯನ್ನು ವಿಚಾರಿಸಿದ ವೇಳೆ ಸತ್ಯಾಂಶ ಗೊತ್ತಾಗಿದೆ. ಕೇರಳ ಮೂಲದ ವ್ಯಕ್ತಿಗಳು ಸ್ಥಳೀಯರೊಬ್ಬರ ರಬ್ಬರ್‌ ತೋಟವೊಂದರಲ್ಲಿ ಟ್ಯಾಪಿಂಗ್‌ ಕೆಲಸ ಮಾಡುತ್ತಿದ್ದು, ಮೀನು ಹಿಡಿಯುವುದಕ್ಕೆಂದು ತೆರಳುವ ವೇಳೆ ಉದ್ದದ ಕತ್ತಿಯನ್ನು ಕೊಂಡುಹೋದ ಕಾರಣ ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next