Advertisement

ಸುಬ್ರಹ್ಮಣ್ಯ: ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ

05:23 PM Mar 16, 2018 | |

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನದ ಬ್ರಹ್ಮರಥ ನಿರ್ಮಾಣಕ್ಕೆ ಉದ್ಯಮಿ ಮುತ್ತಪ್ಪ ರೈ – ಅನುರಾಧಾ ರೈ ಹಾಗೂ ಅಜಿತ್‌ ರೈ – ಡಾ| ಸತ್ವಾ ಎ. ಶೆಟ್ಟಿ ದಂಪತಿ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಮ್ಮುಖದಲ್ಲಿ ಗುರುವಾರ ವೀಳ್ಯ ಪಡೆದರು.

Advertisement

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಇಂಟೆಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ರವೀಂದ್ರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಲ್ಲೇರಿ, ಕೃಷ್ಣಮೂರ್ತಿ ಭಟ್‌, ಮಹೇಶ್‌ ಭಟ್‌ ಕರಿಕ್ಕಳ, ರವೀಂದ್ರನಾಥ ಶೆಟ್ಟಿ, ರಾಜೀವಿ ರೈ ಆರ್‌., ಮಾಧವ ಡಿ., ತಾ. ಪಂ. ಸದಸ್ಯ ಅಶೋಕ ನೆಕ್ರಾಜೆ, ಸುಧೀರ್‌ ಕುಮಾರ್‌ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ ಕಡಬ, ರಾಜೇಶ್‌ ಕಂಬಳ, ರಥಶಿಲ್ಪಿ ರಾಜಗೋಪಾಲ ಉಪಸ್ಥಿತರಿದ್ದರು. ರಥವನ್ನು ಬಿಡದಿ ರಿಯಾಲಿಟಿ ವೆಂಚರ್ ಬೆಂಗಳೂರು ಸಂಸ್ಥೆಯವರು ಸೇವಾರೂಪದಲ್ಲಿ ನಿರ್ಮಿಸಿಕೊಡಲಿದ್ದು, ಎರಡು ಕೋಟಿ ರೂ. ವೆಚ್ಚದಲ್ಲಿ ರಥ ನಿರ್ಮಾಣವಾಗಲಿದೆ. ಮುಂದಿನ ಚಂಪಾ ಷಷ್ಠಿ ವೇಳೆ ಕ್ಷೇತ್ರಕ್ಕೆ ಸಮರ್ಪಿಸುವ ಸಂಕಲ್ಪವನ್ನು ಹೊಂದಿರುವುದಾಗಿ ಮುತ್ತಪ್ಪ ರೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next