Advertisement

ಸುಬ್ರಹ್ಮಣ್ಯ : ತಂದೆಯ ಹತ್ಯೆಗೆ ಯತ್ನಿಸಿ ಪೋಲೀಸರ ವಶವಾದ ಮಕ್ಕಳು

08:57 PM Jul 25, 2020 | sudhir |

ಸುಬ್ರಹ್ಮಣ್ಯ : ಮಕ್ಕಳಿಬ್ಬರು ಸೇರಿ ಹಂದಿ ಪದಾರ್ಥಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ನಾಲ್ಕೂರು ಗ್ರಾಮದ ಅಂಜೇರಿಯಿಂದ ವರದಿಯಾಗಿದೆ.

Advertisement

ಹೊನ್ನಪ್ಪ ನಾಯ್ಕ ಅಂಜೇರಿ ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೊಕೇಶ್, ಹೊನ್ನಪ್ಪರವರ ಮನೆ ಬಳಿಯಲ್ಲೇ ಕೊಟ್ಟಿಗೆಯಲ್ಲಿ ವಾಸವಿದ್ದು, ದೇವಿಪ್ರಸಾದ್ ಗುತ್ತಿಗಾರಿನಲ್ಲಿ ವಾಸವಿದ್ದಾರೆ. ಜು.೨೩ ರ ರಾತ್ರಿ ಹೊನ್ನಪ್ಪರವರ ಮನೆಯಲ್ಲಿ ಹಂದಿ ಪದಾರ್ಥ ಮಾಡಿದ್ದು ಅವರು ಊಟ ಮಾಡಿ ಮಲಗಿದ್ದರು. ರಾತ್ರಿ ದೇವಿಪ್ರಸಾದ್ ಹಂದಿ ಪದಾರ್ಥಕ್ಕೆ ವಿಷ ಬೆರೆಸಿದ್ದು, ಲೊಕೇಶ್ ಕೂಡಾ ಸಹಕರಿಸಿದ್ದಾರೆಂದು ದೂರಲಾಗಿದೆ. ಜು.೨೪ ರ ಬೆಳಗ್ಗೆ ಹೊನ್ನಪ್ಪ ಅವರು ಹಂದಿ ಪದಾರ್ಥ ಸೇವಿಸಿದ್ದು ಬಳಿಕ ವಾಂತಿ ಮಾಡಿಕೊಂಡಿದ್ದಾರೆ. ತೀವ್ರ ಅಸ್ವಸ್ಥ ಗೊಂಡಾಗ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಚೇತರಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಹೊನ್ನಪ್ಪ ಅವರ ಪತ್ನಿ ಇಬ್ಬರು ಪುತ್ರರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next