Advertisement

ಸುಬೋಧ್‌ ಸಿಂಗ್‌ಗೆ ಬೆದರಿಕೆ ಕರೆ: ಪತ್ನಿ ಮಾಹಿತಿ

06:00 AM Dec 07, 2018 | Team Udayavani |

ಲಕ್ನೋ: ಇತ್ತೀಚೆಗೆ ಸಂಭವಿಸಿದ ಬುಲಂದ್‌ಶಹರ್‌ ಗಲಭೆಯಲ್ಲಿ ಉದ್ರಿಕ್ತ ಗುಂಪಿನಿಂದ ಹತ್ಯೆ ಗೀಡಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಅವರ ಪತ್ನಿ ರಜನಿ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತಿಳಿಸಿದ್ದಾರೆ. 

Advertisement

ಲಕ್ನೋದಲ್ಲಿನ ಸಿಎಂ ನಿವಾಸದಲ್ಲಿ ಯೋಗಿ ಅವರನ್ನು ಭೇಟಿ ಮಾಡಿದ ಅವರು, ಅಕ್ರಮ ಗೋ ಹತ್ಯೆ ಕುರಿತ ದೂರು ಗಳನ್ನು ಸಿಂಗ್‌ ಅವರೇ ತನಿಖೆ ಮಾಡುತ್ತಿದ್ದರು. ಹಾಗಾಗಿ, ಅವರಿಗೆ ಬೆದ ರಿಕೆ ಕರೆಗಳು ಬರುತ್ತಿದ್ದವು ಎಂದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಿಎಂ ಯೋಗಿ, ತಪ್ಪಿ ತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಜತೆಗೆ, ಕುಮಾರ್‌ ಸಿಂಗ್‌ ಮಾಡಿದ್ದ ಎಲ್ಲಾ ಸಾಲಗಳ (ಅಂದಾಜು 25-30 ಲಕ್ಷ ರೂ.) ಮನ್ನಾ, ಇಟಾ ಜಿಲ್ಲೆಯ ಜೈತಾರಾ-ಕುರೋಲಿ ರಸ್ತೆಗೆ ಹಾಗೂ ಕಾಲೇಜೊಂದಕ್ಕೆ ಸಿಂಗ್‌ ಹೆಸರಿಡುವ ಭರವಸೆ ನೀಡಿದ್ದಾರೆ. 

ಹತ್ಯೆ ಆರೋಪಿ ಶಿಖರ್‌ ಅಗರ್ವಾಲ್‌ ಎಂಬಾತ ವಿಡಿಯೋ ಸಂದೇಶ ರವಾನಿಸಿ, ಗಲಭೆಯಲ್ಲಿ ತನ್ನ ಪಾತ್ರವಿಲ್ಲವೆಂದು ಹೇಳಿ ಕೊಂಡಿದ್ದಾನೆ. ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳ ನಾಯಕ ಯೋಗೇಶ್‌ ರಾಜ್‌ನನ್ನು ಗುರು ವಾರ ಪೊಲೀಸರು ಬಂಧಿಸಿದ್ದಾರೆ ಎಂದು ನ್ಯೂಸ್‌18 ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next