Advertisement

“ಕೆಎಸ್‌ಒಯು ಹಗರಣ ಸಿಬಿಐ ತನಿಖೆಗೆ ಒಪ್ಪಿಸಿ’

10:48 PM Dec 23, 2019 | Lakshmi GovindaRaj |

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಯ ಹಿಂದಿನ ಕುಲಪತಿ, ವಿವಿಯ 5 ಲಕ್ಷ ವಿದ್ಯಾರ್ಥಿಗಳ ಜೀವನದ ಜತೆಗೆ ಚೆಲ್ಲಾಟವಾಡಿದ್ದಾರೆ. ಸಾವಿರಾರು ಕೋಟಿಗಳ ಭ್ರಷ್ಟಾಚಾರ ನಡೆಸಿರುವ ಈ ಹಗರಣ ದೇಶಾದ್ಯಂತ ಮತ್ತು ವಿದೇಶಗಳಲ್ಲಿರುವ ನೂರಾರು ಶೈಕ್ಷಣಿಕ ಪಾಲುದಾರ ಸಂಸ್ಥೆಗಳಿಗೂ ತೊಂದರೆಯನ್ನುಂಟು ಮಾಡಿದೆ. ಹೀಗಾಗಿ, ಕೂಡಲೇ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಮುಕ್ತ ವಿವಿ ಹಗರಣದ ಬಗ್ಗೆ ನಾನು ಮಾಡುತ್ತಿರುವ ಆರೋಪಗಳ ಬಗ್ಗೆ ಪತ್ರಕರ್ತರ ಭವನಕ್ಕೆ ಚರ್ಚೆಗೆ ಬನ್ನಿ ಎಂದು ಪ್ರೊ.ಕೆ.ಎಸ್‌.ರಂಗಪ್ಪ ನೀಡಿದ್ದ ಪಂಥಾಹ್ವಾನ ಸ್ವೀಕರಿಸಿ, ಸಿದ್ಧರಾಗಲು ಪ್ರಶ್ನಾವಳಿಯನ್ನು ನೀಡಿದ್ದೆ. ಪ್ರಶ್ನಾವಳಿ ನೋಡಿದ ಪ್ರೊ.ರಂಗಪ್ಪ ಚರ್ಚೆಗೆ ಬರಲೇ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next