Advertisement

ಜನ್ಮದಿನದಂದೇ ಶರಣಪ್ರಕಾಶ ನಾಮಪತ್ರ ಸಲ್ಲಿಕೆ

03:04 PM Apr 21, 2018 | Team Udayavani |

ಸೇಡಂ: ಸಚಿವ ಡಾ| ಶರಣಪ್ರಕಾಶ ಪಾಟೀಲ ಶುಕ್ರವಾರ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶ್ರೀ ಕೊತ್ತಲ ಬಸವೇಶ್ವರ  ದೇವಾಲಯಕ್ಕೆ ಆಗಮಿಸಿದ ಶರಣಪ್ರಕಾಶ ಮೊದಲಿಗೆ ದೇವರ ದರ್ಶನ ಪಡೆದರು. ನಂತರ ತೆರೆದ ವಾಹನದಲ್ಲಿ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಚುನಾವಣಾಧಿಕಾರಿ ಡಾ| ಸುಶೀಲಾ ಅವರಿಗೆ ನಾಮಪತ್ರ ಸಲ್ಲಿಸಿದರು. 

Advertisement

ಜನ್ಮದಿನ: ಏ.20ರಂದು ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಹುಟ್ಟು ದಿನ. ಅಂದೇ ನಾಮಪತ್ರ ಸಲ್ಲಿಸಿದ ಅವರಿಗೆ ದಾರಿಯುದ್ದಕ್ಕೂ ಶುಭಾಷಯಗಳ  ಮಹಾಪೂರ ಹರಿದುಬಂದಿತ್ತು. ಮುಕ್ರಂಖಾನ್‌ ಅವರು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸುವಾಗ ಭಾಗಿಯಾದರು.

ಬಸವರಾಜ ಪಾಟೀಲ ಊಡಗಿ, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ನಾಗೇಶ್ವರರಾವ್‌ ಮಾಲಿಪಾಟೀಲ, ಕಾಡಾ ಅಧ್ಯಕ್ಷ ಮಹಾಂತಪ್ಪ  ಸಂಗಾವಿ, ಧೂಳಪ್ಪ ದೊಡ್ಡಮನಿ, ಕರೆಪ್ಪ ಪಿಲ್ಲಿ, ಸುದರ್ಶನರೆಡ್ಡಿ ಪಾಟೀಲ, ಶ್ರೀನಿವಾಸ ಪ್ಯಾಟಿ, ಹಾಜಿ ನಾಡೇಪಲ್ಲಿ, ನಜಿಮೋದ್ದಿನ್‌, ಜಗನ್ನಾಥ ಪಾಟೀಲ,

ರಾಜಶೇಖರ ಪುರಾಣಿಕ, ಬಸಮ್ಮ ಪಾಟೀಲ, ಸುಭಾಶ ಮಹಾಡಿಕ, ಈರಪ್ಪ ಗುಂಡಗುರ್ತಿ, ಶಿವರುದ್ರಪ್ಪ ಕೊಳಕೂರ, ಸತೀಶ ಪೂಜಾರಿ, ರಾಜು ಹಡಪದ, ಸಂತೊಷ ತಳವಾರ, ಅನಂತಯ್ಯ ಮುಸ್ತಾಜರ, ಜಗದೀಶ ಯಾಲಕ್ಕಿ ಇನ್ನಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next