Advertisement
12 ತಾತ್ಕಾಲಿಕ ಉಪ ನಗರಗಳ ನಿರ್ಮಾಣಕ್ಕೆ 75 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶ್ರವಣಬೆಳಗೊಳದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ರೈತರ 476 ಎಕರೆ ಜಮೀನನ್ನು ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಉಪ ನಗರಗಳನ್ನು ನಿರ್ಮಿಸಲಾಗಿದೆ.
Related Articles
ಮಹಾಮಸ್ತಕಾಭಿಷೇಕಕ್ಕೆ ಬರುವ ಜೈನಮುನಿಗಳಿಗೆ ತ್ಯಾಗಿನಗರ, ಮಹಾಮಸ್ತಕಾಭಿಷೇಕದ ಕಳಶ ಖರೀದಿಸುವವರಿಗೆ ಕಳಶ ನಗರ, ವಿವಿಧ ರಾಜ್ಯಗಳಿಂದ ಬರುವ ಅತಿ ಗಣ್ಯರಿಗೆ ನಿರ್ಮಿಸಿರುವ ಗಣ್ಯಾತಿಗಣ್ಯರ ನಗರಗಳನ್ನು ಜೈನ ಮಠ ವಹಿಸಿಕೊಂಡು ಅಲ್ಲಿನ ಊಟೋಪಚಾರ ಸಹಿತ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಿದೆ. ಆಯಾಯ ಇಲಾಖೆಗೆ ಸಂಬಂಧಿಸಿದಂತೆ ಸೇವಾ ನಗರ, ( ಸ್ವಯಂ ಸೇವಕರಿಗೆ), ಪೊಲೀಸ್ ನಗರ (ಭದ್ರತೆಗಾಗಿ ಆಗಮಿಸುವ ಪೊಲೀಸರಿಗೆ), ಅಧಿಕಾರಿಗಳ ನಗರ (ಜವಾಬ್ದಾರಿಯುತ ಅಧಿಕಾರಿಗಳಿಗೆ), ಯಾತ್ರಿ ನಗರ (ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ), ಮಾಧ್ಯಮ ನಗರ (ಸುದ್ದಿಗಾರರು, ಛಾಯಾಗ್ರಾಹಕರು) ಹೀಗೆ ಉಪ ನಗರಗಳ ನಿರ್ಮಾಣ ಮಾಡಲಾಗಿದೆ.
Advertisement