Advertisement

ಜಡಿಮಳೆ ಕಾರಣ ಮರು ಪರೀಕ್ಷೆ : ಮುಂಬಯಿ ವಿವಿ ಪ್ರಕಟನೆ

05:07 PM Jul 03, 2018 | Team Udayavani |

ಮುಂಬಯಿ : ಮಹಾನಗರಿಯಲ್ಲಿ ನಿರಂತರ ಜಡಿ ಮಳೆಯಿಂದಾಗಿ ಸಾಮಾನ್ಯ ಜನಜೀವನ ತೀವ್ರವಾಗಿ ಬಾಧಿತವಾಗಿರುವಂತೆಯೇ, ಮಳೆ ಕಾರಣ ಇಂದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ನಡೆಸಲಾಗುವ ಪರೀಕ್ಷೆಯನ್ನು ಎದುರಿಸಬಹುದಾಗಿದೆ ಎಂದು ಮುಂಬಯಿ ವಿಶ್ವವಿದ್ಯಾಲಯ ಪ್ರಕಟಿಸಿದೆ.

Advertisement

ಪರೀಕ್ಷೆಗಳ ಹೊಸ ವೇಳಾ ಪಟ್ಟಿಯನ್ನು ಬೇಗನೆ ಪ್ರಕಟಿಸಲಾಗುವುದು ಎಂದು ವಿವಿ ಪ್ರಕಟನೆ ತಿಳಿಸಿದೆ.

ಮುಂಬಯಿ ಮಹಾನಗರಿಯಲ್ಲಿ ಇಂದು ಬೆಳಗ್ಗಿನಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಂಧೇರಿಯಲ್ಲಿ ರೈಲ್ವೇ ಮೇಲ್ಸೆತುವೆ ಕುಸಿದ ಪರಿಣಾಮವಾಗಿ ಪಶ್ಚಿಮ ರೈಲ್ವೆ ಲೋಕಲ್‌ ಟ್ರೈನ್‌ ಸೇವೆ ತೀವ್ರವಾಗಿ ಬಾಧಿತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next