Advertisement

ಸಾವಯವ ಬೆಲ್ಲ ತಯಾರಿಕೆ ಘಟಕಕ್ಕೆ ವಿದ್ಯಾರ್ಥಿಗಳ ಭೇಟಿ

12:03 AM Feb 17, 2020 | Sriram |

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ನಿಸರ್ಗ ಇಕೋ ಕ್ಲಬ್‌ ವತಿಯಿಂದ ಶಾಲಾ ವಿದ್ಯಾರ್ಥಿಗಳು ಶಾನಾಡಿ ಗ್ರಾಮದ ಸಾವಯವ ಬೆಲ್ಲ ತಯಾರಿಸುವ ಅಲೆಮನೆಗೆ ಗುರುವಾರ ಭೇಟಿ ನೀಡಿದರು.

Advertisement

ಶಾಲೆಯ ನಿಸರ್ಗ ಇಕೋ ಕ್ಲಬ್‌ನ 36 ವಿದ್ಯಾರ್ಥಿಗಳು ಹಾಗೂ ಸ್ಕೌಟ್‌ ಘಟಕದ 12 ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕ ಜಿ. ವಿಶ್ವನಾಥ ಭಟ್‌ ನೇತೃತ್ವದಲ್ಲಿ ಭೇಟಿ ನೀಡಿದರು.

ಪ್ರಗತಿಪರ ಕೃಷಿಕರಾದ ಶಾನಾಡಿ ಉಮೇಶ ಶೆಟ್ಟಿ ಮತ್ತು ರಾಮಚಂದ್ರ ಭಟ್‌ ಅವರು ಸುಮಾರು 20 ಎಕ್ರೆ ಜಮೀನಿನಲ್ಲಿ ಕಬ್ಬ ಬೆಳೆದು ತಮ್ಮ ಹೊಲದಲ್ಲೇ ಅಲೆಮನೆ ನಿರ್ಮಿಸಿ ಕಬ್ಬು ಅರೆದು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲವನ್ನು ತಯಾರಿಸುವ ರೀತಿಯನ್ನು ನೋಡಿ ಆನಂದಿಸಿದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಅಲೆಮನೆ ಪದ್ಧತಿಯನ್ನು ಪುನರುಜ್ಜೀವನಗೊಳಿಸಿದ ರೈತರನ್ನು ಅಭಿನಂದಿಸಿ ದರು. ಬಳಿಕ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಕುಂದಾಪುರದ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದರು.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ, ಸಹ ಶಿಕ್ಷಕರಾದ ರೇಖಾ ಖಾರ್ವಿ, ನಾಗರಾಜ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next