Advertisement

ಬಾಲಕಿಯರ ವಿದ್ಯಾರ್ಥಿ ನಿಲಯ ಮತದಾನ ಪ್ರಾತ್ಯಕ್ಷಿಕೆ

12:30 AM Mar 23, 2019 | Team Udayavani |

ಉಡುಪಿ:  ಕಿನ್ನಿಮೂಲ್ಕಿಯ ಡಿ. ದೇವರಾಜ ಅರಸು ಮೆಟ್ರಿಕ್‌ ಅನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ  ಬುಧವಾರ ವಿದ್ಯಾರ್ಥಿನಿಯರಿಗೆ  ಮತದಾನದ ಬಗ್ಗೆ  ಪ್ರಾತ್ಯಕ್ಷಿಕೆ ನಡೆಯಿತು.
 
ಉಡುಪಿ ಜಿಲ್ಲಾ  ಸ್ವೀಪ್‌ ಸಮಿತಿಯ ಅಧ್ಯಕ್ಷೆ  ಸಿಂಧೂ ಬಿ. ರೂಪೇಶ್‌ ಮತದಾನದ ಜಾಗೃತಿಯ ಬಗ್ಗೆ ಅರಿವುಮೂಡಿಸಿ,ನಿರ್ಭೀತಿಯಿಂದ ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. 

Advertisement

ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ  ವಿಧಿ ಬೋಧಿಸಿ   ಮತ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಜಿಲ್ಲಾ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪಲಮಾಣಿ ಭಾಗವಹಿಸಿದ್ದರು. ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಜಿ.ಗಿರಿಧರ ಗಾಣಿಗ ಸ್ವಾಗತಿಸಿದರು. ನಿಲಯದ ವಿದ್ಯಾರ್ಥಿನಿ ಅನ್ನಪೂರ್ಣ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next