Advertisement

ಅತಿಥಿ ಉಪನ್ಯಾಸಕರ ಅನಿರ್ದಿಷ್ಟವಾಧಿ ಧರಣಿ; ಅಘೋಷಿತವಾಗಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

01:24 PM Dec 13, 2021 | Team Udayavani |

ಕುಷ್ಟಗಿ: ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ಅತಿಥಿ ಉಪನ್ಯಾಸಕರು ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಅಘೋಷಿತವಾಗಿ ತರಗತಿ ಬಹಿಷ್ಕರಿಸಿದರು.

Advertisement

ಎಂದಿನಂತೆ ಬೆಳಗ್ಗೆ ಮೂರು ತರಗತಿಗಳು  ಪೂರ್ಣಕಾಲಿಕ‌ ಉಪನ್ಯಾಸಕರಿಂದ ಆರಂಭಿಸಲಾಗಿತ್ತು. ಇನ್ನುಳಿದ ತರಗತಿಗಳಲ್ಲಿ ಉಪನ್ಯಾಸಕರು ಇಲ್ಲದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ಜಮಾಯಿಸಿದರು.

ಕೆಲ ವಿದ್ಯಾರ್ಥಿಗಳು ಆಕ್ಷೆಪ ವ್ಯಕ್ತಪಡಿಸಿ, ತರಗತಿಗಳನ್ನು ಬಹಿಷ್ಕರಿಸಲು ಉಪನ್ಯಾಸಕರ ಮೇಲೆ ಒತ್ತಡ ಹೇರಿದ್ದರಿಂದ ಸದರಿ ವಿದ್ಯಾರ್ಥಿಗಳು ಸಹ ತರಗತಿ ಬಹಿಷ್ಕರಿಸಿದರು. ನಂತರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತಹಶೀಲ್ದಾರ ಕಛೇರಿಗೆ ಹೋಗುವ ತಯಾರಿಯಲ್ಲಿರುವಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಏಕಾಏಕಿ ಪ್ರತಿಭಟನೆ ಗೆ ಅವಕಾಶ ಇಲ್ಲ. ಒಂದೆರೆಡು ದಿನ ಮುನ್ನವೇ ಮಾಹಿತಿ ನೀಡಬೇಕು. ಪ್ರತಿಭಟನೆಯಲ್ಲಿ ಏನಾದರೂ ಎಡವಟ್ಟು ಆದರೆ ಯಾರು ಹೊಣೆಗಾರರು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ ಕಛೇರಿಗೆ ಮೆರವಣಿಗೆ ಕೈ ಬಿಟ್ಟು ಪ್ರಾಚಾರ್ಯ ರವಿ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.

ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದು ಈಗ ಕಾಲೇಜು ಪ್ರಾರಂಭವಾಗಿದ್ದು ಈ ಸಂದರ್ಭದಲ್ಲಿ 50 ಅತಿಥಿ ಉಪನ್ಯಾಸಕರು ಮುಷ್ಕರ ನಿರತರಾಗಿದ್ದು, ಅತಿಥಿ ಉಪನ್ಯಾಸಕರನ್ನೆ ನೆಚ್ಚಿಕೊಂಡಿರುವ ಸದರಿ ಕಾಲೇಜಿನಲ್ಲಿ ಡಿ.10 ರಿಂದ ಬಿಸಿ ಮುಟ್ಟಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾದರೂ, ಅತಿಥಿ ಉಪನ್ಯಾಸಕರ ಗೈರಾಗಿರುವುದು ಸಮಸ್ಯೆ ಉಲ್ಬಣಿಸಿದ್ದು ಬೆಳಗಾವಿ ಚಳಿಗಾಲದ ಆಧಿವೇಶನದಲ್ಲಿ ಇತ್ಯಾರ್ಥವಾಗಬೇಕಿದೆ.

Advertisement

ಶಾಸಕ ಬಯ್ಯಾಪೂರ ಅಸಹಾಯಕ:

ಅತಿಥಿ ಉಪನ್ಯಾಸಕರ ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಿರುವ ತರಗತಿಗಳಾದರೂ ನಡೆಯಬೇಕಿದೆ. ಪರಿಸ್ಥಿತಿ ಹೀಗಿದ್ದು ವಿದ್ಯಾರ್ಥಿಗಳ ಮನವೋಲೈಸಿ ತರಗತಿ ನಡೆಸಬೇಕಿದೆ. ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ವಿಷಯ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರಿಗೆ ಮನವರಿಕೆ‌ ಮಾಡಲಾಗಿದೆ. ಅಲ್ಲದೇ ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನೆ ಆಗಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next