Advertisement

ಶಾಲೆಗೆ ಬಸ್‌ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ

09:46 AM Oct 30, 2021 | Team Udayavani |

ಸೇಡಂ: ಕೆಲ ದಿನಗಳ ಹಿಂದಷ್ಟೇ ಸುರಿಯುವ ಮಳೆಯನ್ನು ಲೆಕ್ಕಿಸದೇ ಬಸ್‌ಗೆ ಅಡ್ಡಲಾಗಿ ನಿಂತು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿತ್ತು.

Advertisement

ಈಗ ಅಂತದ್ದೇ ಮತ್ತೂಂದು ಘಟನೆ ಊಡಗಿಯಲ್ಲಿ ನಡೆದಿದೆ. ತಾಲೂಕಿನ ಊಡಗಿ ಹಾಗೂ ಹಂಗನಹಳ್ಳಿ ಗ್ರಾಮಕ್ಕೆ ಶಾಲೆ-ಕಾಲೇಜು ನಡೆಯುವ ಸಮಯಕ್ಕೆ ಪಟ್ಟಣಕ್ಕೆ ಬಸ್‌ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬಸ್‌ ತಡೆದು, ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.

ಊಡಗಿ ಹಾಗೂ ಹಂಗನಹಳ್ಳಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 150 ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಈ ಭಾಗದಲ್ಲಿ ಕೇವಲ ಒಂದು ಬಸ್‌ ಕಲ್ಪಿಸಲಾಗಿದೆ. ಕೂಡಲೇ ಇನ್ನೊಂದು ಬಸ್‌ ಕಲ್ಪಿಸಿ, ಸಮಯಕ್ಕೆ ಸರಿಯಾಗಿ ಬಿಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next