Advertisement

ಎನ್ಪಿಎಸ್‌ ನೌಕರರಿಂದ ಹಳೇ ಪಿಂಚಣಿಗಾಗಿ ಹೋರಾಟ

04:37 PM Dec 20, 2022 | Team Udayavani |

ಚಿಕ್ಕಬಳ್ಳಾಪುರ: ಹೂಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಮಾಡು ಇಲ್ಲವೇ ಮಡಿ ಹೋರಾಟ ಹಮ್ಮಿಕೊಂಡು ಈ ಹೋರಾಟಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಇಲಾಖೆ ಗಳಲ್ಲಿನ ಎನ್‌ಪಿಎಸ್‌ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಪ್ರಯಾಣ ಬೆಳೆಸಿದರು.

Advertisement

ಬೆಂಗಳೂರಿಗೆ ತೆರಳುವ ಮುನ್ನ ತಾಲೂಕು ಕಾರ್ಯದರ್ಶಿ ಅಮರ್‌ ಮಾತನಾಡಿ, ನಮ್ಮ ಈ ಹೋರಾಟ ಯಾರ ವಿರುದ್ಧ ಅಲ್ಲ ಇದು ನಮ್ಮ ಹಕ್ಕು ಪಡೆಯಲು ಮಾಡುತ್ತಿರುವ ಹೋರಾಟ,ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಆದರೆ ನಮ್ಮ ಮನವಿಗೆ ಸ್ಪಂದಿಸಿಲ್ಲ ಹಾಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೂಸ ಪಿಂಚಣಿ ಯೋಜನೆಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವ ಧರಣಿ ನಡೆಯುತ್ತಿ ದ್ದು ಚಿಕ್ಕಬಳ್ಳಾಪುರದಿಂದ ಸಹಸ್ರಾರು ಸಂಖ್ಯೆ ಯಲ್ಲಿ ನೌಕರರು ತೆರಳುತ್ತಿದ್ದೇವೆ ಎಂದರು.

ನಾವು ಸಂಘಟಿತರಾಗಿ ಹೋರಾಟ ನಡೆಸಬೇಕು ನಮ್ಮ ಬೇಡಿಕೆ ಸರ್ಕಾರದ ಮುಂದಿಡಬೇಕು ಆಗಲೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತದೆ ಜಾರಿಗೊಳಿಸಲು ಯಾವೆಲ್ಲ ಹೋರಾಟ ನಡೆಯಲಿದೆ ಅದಕ್ಕೆಲ್ಲ ನಮ್ಮಲರ ಬೆಂಬಲ ಇರಲೇಬೇಕು ಎಂದರು.

ಜಿಲ್ಲಾ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ ನೌಕರರನ್ನು ಉದ್ದೇಶಿಸಿ ಮಾತನಾಡಿ ದರು,ತಾಲೂಕು ಅಧ್ಯಕ್ಷ ನಾಗರಾಜ್‌,ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್‌, ಮಾಧ್ಯಮ ಸಲಹೆಗಾರ ಮಂಜುನಾಥ ಎನ್‌,ಎನ್‌ ಪಿಎಸ್‌ ನೌಕರರ ಸಂಘದ ಅಧ್ಯಕ್ಷ ವಿಷ್ಣುವರ್ಧನ್‌, ಖಜಾಂಜಿ ಶಿವ ಕುಮಾರ್‌,ಆರೋಗ್ಯ ಇಲಾಖೆಯ ಭಾನು ಪ್ರಕಾಶ್‌,ಅರುಣ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next