Advertisement

ಆಸ್ತಿ ವಿಚಾರಕ್ಕೆ ಕಲಹ: ತಮ್ಮನಿಗೆ ಚಾಕುವಿನಿಂದ ಇರಿದ ಸಹೋದರರು!

03:04 PM Jan 08, 2022 | Team Udayavani |

ಹುಬ್ಬಳ್ಳಿ: ಆಸ್ತಿ ವಿಚಾರವಾಗಿ ಸಹೋದರರೇ ತಮ್ಮನಿಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ಹಳೇಹುಬ್ಬಳ್ಳಿಯ ಕೃಷ್ಣಾಪುರ ಓಣಿಯಲ್ಲಿ ಸಂಭವಿಸಿದೆ.

Advertisement

23 ವರ್ಷದ ನಿತಿನ್ ಅರುಣ ಚಂದಗಡಕರ ಇರಿತಕ್ಕೊಳಗಾದಾತ.

ಇದನ್ನೂ ಓದಿ:ಕೊರಗಜ್ಜನ ಅಪಹಾಸ್ಯ: ಮಂಗಳವಾರ ಸಾಮೂಹಿಕ ಪ್ರಾರ್ಥನೆಗೆ ವಿಹೆಚ್ ಪಿ ಕರೆ

ಆಸ್ತಿಯ ವಿಷಯವಾಗಿ ಸಹೋದರರ ನಡುವೆ ಜಗಳವುಂಟಾಗಿ ವಿಕೋಪಕ್ಕೆ ಹೋದಾಗ ಸಹೋದರರು ಕೂಡಿ ತಮ್ಮನಿಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next