Advertisement
ರಾಜ್ಯ ಸಶಸ್ತ್ರ ಮೀಸಲು ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾದ ಮುಕ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಮಂಗಳವಾರ ಈ ಕಾರ್ಯಕ್ರಮ ನಡೆಯಿತು.
Related Articles
Advertisement
ಪೊಲೀಸರು ದೈಹಿಕವಾಗಿ ಸಮರ್ಥರಾಗಿರಬೇಕು. ಹೊಟ್ಟೆ ಬೆಳಸಿಕೊಳ್ಳಬಾರದು. ದೈಹಿಕ ಸಾಮರ್ಥಯ ಕಾಪಾಡಿಕೊಳ್ಳುವುದು ಕರ್ತವ್ಯದ ಒಂದು ಭಾಗವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಜಾಥಾಗೆ ಅಭಿನಂದನೆ: ಬೀದರ್ನಿಂದ ಜು.12ರಂದು ಆರಂಭಗೊಂಡು ಜು.25ಕ್ಕೆ ಬೆಂಗಳೂರಿನಲ್ಲಿ ಕೊನೆಗೊಂಡ ಸೈಕಲ್ ಜಾಥಾಗೆ ಮುಖ್ಯಮಂತ್ರಿಯವರು ಅಭಿನಂದನೆ ಸಲ್ಲಿಸಿದರು. 28 ಜಿಲ್ಲೆಗಳ 1,750 ಕಿ.ಮೀ ಸಂಚರಿಸಿರುವ ಜಾಥ ಎರಡು ಸಾವಿರ ಹಳ್ಳಿಗಳನ್ನು ಸುತ್ತಿದೆ. ಈ ವೇಳೆ ಮಂದಿರ, ಮಸೀದಿ, ಚರ್ಚ್ ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟಿದೆ. ಹೀಗಾಗಿ ಜಾಥಾದಲ್ಲಿದ್ದವರಿಗೆ ಬದುಕಿನ ದರ್ಶನ ಆಗಿದೆ ಎಂದರು.
“ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಇರಬಾರದು. ಅದನ್ನು ಸರ್ಕಾರ ಸಹಿಸುವುದಿಲ್ಲ. ಒಂದು ವೇಳೆ ಅಶಿಸ್ತು ಕಂಡು ಬಂದರೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುವುದಿಲ್ಲ’.-ಮುಖ್ಯಮಂತ್ರಿ ಸಿದ್ದರಾಮಯ್ಯ.