Advertisement

ಶಿರ್ವ: ಬಿಗು ಬಂದೋಬಸ್ತ್; ಅನಗತ್ಯ ಓಡಾಟದ ವಾಹನ ವಶ

12:38 PM May 10, 2021 | Team Udayavani |

ಶಿರ್ವ: ರಾಜ್ಯ ಸರಕಾರ ಸೋಮವಾರದಿಂದ ಘೋಷಿಸಿರುವ ಕಠಿಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಿರ್ವ ಠಾಣಾ ವ್ಯಾಪ್ತಿಯ ಶಿರ್ವ ಮತ್ತು ಮೂಡುಬೆಳ್ಳೆ ಪರಿಸರದಲ್ಲಿ ಠಾಣಾಧಿಕಾರಿ ಶ್ರೀಶೈಲ ಮುರಗೋಡ ಮತ್ತು ಕ್ರೈಂ ಎಸ್‌ಐ ವೇದಾವತಿ ಅವರ ನೇತೃತ್ವದಲ್ಲಿ ಬಿಗು ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಬ್ಯಾರಿಕೇಡ್‌ ಅಳವಡಿಸಿ ತಪಾಸಣೆ ನಡೆಸಿ ಕೆಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮುಂಜಾನೆಯಿಂದಲೇ ಬಿಗು ತಪಾಸಣೆಗೊಳಪಡಿಸಿ ವಾಹನಗಳ ಸಂಚಾರ ನಿಷೇಧಿಸಿದ ಪರಿಣಾಮ ಜನಸಂಚಾರ ಕಡಿಮೆಯಿದ್ದು ವ್ಯಾಪಾರ ವ್ಯವಹಾರ ಕಡಿಮೆಯಿತ್ತು. ಜನರು ಅಗತ್ಯವಸ್ತುಗಳನ್ನು ಹಿಡಿದುಕೊಂಡು ನಡೆದುಕೊಂಡು ಹೋಗುವ ದೃಶ್ಯ ಕಂಡುಬಂದಿದ್ದು, ಎಲ್ಲಿಯೂ ಜನಸಂದಣಿ ಇರಲಿಲ್ಲ. ವಾಹನಗಳ ಸಂಚಾರವಿಲ್ಲದೆ ಶನಿವಾರ, ರವಿವಾರ ಜನಜಂಗುಳಿಯಿಂದ ತುಂಬಿದ್ದ ಪ್ರದೇಶಗಳು ಖಾಲಿಯಾಗಿದ್ದು, ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಗಿದೆ.

ಮೆಡಿಕಲ್‌, ತರಕಾರಿ,ದಿನಸಿ ಮತ್ತಿತರ ಅಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದು ಬೆಳಿಗ್ಗೆ 10ರ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು ,ಜನ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next