Advertisement

ಶಬರಿಮಲೆ ಸನ್ನಿಧಿಯ ಹೋಟೆಲ್‌ಗ‌ಳ ಮೇಲೆ ನಿಗಾ

08:55 AM Dec 01, 2019 | Team Udayavani |

ಶಬರಿಮಲ: ಶಬರಿಮಲೆ ಸನ್ನಿಧಿಯ ಹೋಟೆಲ್‌ಗ‌ಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಹಳಸಲು ಆಹಾರ ನೀಡಿದರೆ, ದುಬಾರಿ ದರ ವಿಧಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಎಚ್ಚರಿಕೆ ನೀಡಿದೆ. ಇಲ್ಲಿನ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳ ಪ್ರತಿ ಸಿಬ್ಬಂದಿ ಕೂಡ ಆರೋಗ್ಯ ಕಾರ್ಡ್‌ ಹೊಂದಿರಬೇಕು. ಶುಚಿತ್ವ ಕುರಿತು ನಿರಂತರ ತಪಾಸಣೆ ನಡೆಸುತ್ತಿರಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಟಿಡಿಬಿ ಅಧ್ಯಕ್ಷ ಎನ್‌.ವಾಸು ತಿಳಿಸಿದ್ದಾರೆ.

Advertisement

ನ.16ರಿಂದ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ಪೂಜಾ ಕಾರ್ಯ ಶುರುವಾಗಿದ್ದು, ಇದುವರೆಗೂ 39 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಪ್ರಸಕ್ತ ವರ್ಷ ಈವರೆಗೆ 8 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next