Advertisement

Udupi ಒತ್ತಡರಹಿತ ಶಿಕ್ಷಣ: ಡಾ| ಸುದರ್ಶನ್‌ ಬಲ್ಲಾಳ್‌ ಕರೆ

12:06 AM Sep 24, 2023 | Team Udayavani |

ಉಡುಪಿ: ಒತ್ತಡದಿಂದಲೇ ಶಿಕ್ಷಣವನ್ನು ಪಡೆಯಬೇಕಾದ ಸ್ಥಿತಿ ಇದೆ. ಇದರಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಒತ್ತಡರಹಿತ ಶಿಕ್ಷಣ ಕ್ರಮ ರೂಪಿಸಲು ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ತಜ್ಞರು ಗಂಭೀರ ಚಿಂತನೆ ನಡೆಸಬೇಕು ಎಂದು ಎಂಜಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಬೆಂಗಳೂರಿನ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ. ಅಧ್ಯಕ್ಷ ಡಾ| ಎಚ್‌. ಸುದರ್ಶನ್‌ ಬಲ್ಲಾಳ್‌ ಆಶಯ ವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನ ಸಮಾರಂ ಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಧಾವಂತದಿಂದ ವಿಪರೀತ ಸ್ಪರ್ಧೆಗಳು ಏರ್ಪಡುತ್ತಿವೆ. ಮಗು ಜನಿಸುವ ಮೊದಲೇ ಶಾಲೆಗೆ ಸೇರಿಸಲು ಬೇಕಾದ ತಯಾರಿ ಮಾಡಿಕೊಳ್ಳಬೇಕಾಗಿದೆ. ಪುಟ್ಟ ಮಕ್ಕಳಿಗೂ ಸಂದರ್ಶನವಿರುತ್ತದೆ. ಉನ್ನತ ಶಿಕ್ಷಣದಲ್ಲಿಯೂ ಈ ಸ್ಪರ್ಧೆಗಳು ಮುಂದುವರಿಯುತ್ತಲೇ ಒತ್ತಡದ ವಾತಾವರಣದೊಂದಿಗೇ ಬದುಕನ್ನು ನಡೆಸಬೇಕಾಗಿದೆ. ಯುವ ಪೀಳಿಗೆಯ ಆತ್ಮಹತ್ಯೆಗಳು ದೇಶದ ಅಭಿವೃದ್ಧಿಗೆ ತಡೆಯುಂಟು ಮಾಡುತ್ತವೆ. ಶಿಕ್ಷಣ ವು ಒತ್ತಡರಹಿತವಾಗಿರಬೇಕು, ಸಮಾಜ ಮುಖೀಯಾಗಿರಬೇಕು ಮತ್ತು ಮಾನವಿ àಯ ಮುಖೀಯಾಗಿರಬೇಕು ಎಂದು ಡಾ| ಬಲ್ಲಾಳ್‌ ಕರೆ ನೀಡಿದರು.

ಶಿಕ್ಷಣವು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಇಲ್ಲ. ಯುವ ಪೀಳಿಗೆಯ ಮನಸ್ಸುಗಳನ್ನು ಬಲಗೊಳಿಸುವುದು, ಸ್ವಾವಲಂಬಿಯಾಗಿಸುವುದರಲ್ಲಿಯೇ ಶಿಕ್ಷಣ ಕ್ಷೇತ್ರದ ಸಾಧನೆ ಇದೆ. ನನ್ನ ಜೀವನದ ಭವಿಷ್ಯವನ್ನೂ ಇದೇ ಕಾಲೇಜಿನ ಪ್ರಾಧ್ಯಾಪಕರು ರೂಪಿಸಿದ್ದಾರೆ. ಸಿಬಂದಿಯ ಕಠಿನ ಪರಿಶ್ರಮವೇ ಸಂಸ್ಥೆಯ ಬೆನ್ನೆಲುಬು. ಕಾಲೇಜಿನ ಆತ್ಮವೇ ವಿದ್ಯಾರ್ಥಿವೃಂದ. ಅವರು ಬದುಕಿನ ಸವಾಲನ್ನು ಎದುರಿಸುವ ಬಗೆಗೆ ಉಪನ್ಯಾಸಕರು ಬೋಧಿಸಬೇಕಾಗಿದೆ ಎಂದು ಡಾ| ಬಲ್ಲಾಳ್‌ ಹೇಳಿದರು.

ಕಾಲೇಜಿಗೆ ಬೇಕಾದ ಎಲ್ಲ ಸಹಕಾರವನ್ನು ಮಾಹೆ ವಿ.ವಿ.ಯಿಂದ ನೀಡಲಾಗುವುದು ಎಂದು ಮಾಹೆ ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್‌ ತಿಳಿಸಿದರು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಕಾರ್ಯ ದರ್ಶಿ ಬಿ.ಪಿ. ವರದರಾಯ ಪೈ ಶುಭ ಕೋರಿದರು.

Advertisement

ಲಾಂಛನ ಅನಾವರಣ
ಉಪನ್ಯಾಸಕ ಮನೋಷ್‌ ವಿನ್ಯಾಸ ಗೊಳಿಸಿದ ಲಾಂಛನವನ್ನು ಅನಾವರಣ ಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಮಾಲತಿ ದೇವಿ ವಂದಿಸಿದರು. ಐಕ್ಯೂಎಸಿ ಸಂಚಾಲಕ ಪ್ರೊ| ಅರುಣ್‌ ಕುಮಾರ್‌ ಅತಿಥಿಗಳನ್ನು ಪರಿಚಯಿಸಿ ದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್‌ ನಾಯ್ಕ ಉಪಸ್ಥಿತರಿದ್ದರು.

ಮನೆ ಅಡವಿಟ್ಟು ಶುಲ್ಕ ಪಾವತಿ!
ಮದ್ರಾಸ್‌ ವಿ.ವಿ.ಯಲ್ಲಿ ಕಾಲೇಜು ಸಂಯೋಜನೆ ಶುಲ್ಕ 3 ಲ.ರೂ. ಪಾವತಿಸಲು ಡಾ| ಟಿ.ಎಂ.ಎ. ಪೈಯವರು ಮನೆಯನ್ನು ಅಡವಿಟ್ಟರು. 1949ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮದ್ರಾಸ್‌ ಸರಕಾರದಿಂದಲೇ ಆಕ್ಷೇಪಣೆ ಬಂದಿತ್ತು. ಇದನ್ನು ಎದುರಿಸಲು ವಿದ್ಯಾರ್ಥಿನಿಯೊಬ್ಬಳು ಮದ್ರಾಸ್‌ ಉಚ್ಚ ನ್ಯಾಯಾಲಯಕ್ಕೆ ಹೋಗ
ಬೇಕಾಯಿತು. ಈಗ ನಾವು ಶೇ. 33 ಮಹಿಳಾ ಮೀಸಲಾತಿ ಮಸೂದೆಯ ಕಾಲದಲ್ಲಿದ್ದೇವೆ ಎಂದು ಡಾ| ಪೈ ಅವರ ಪುತ್ರ, ಎಂಜಿಎಂ ಕಾಲೇಜು ಟ್ರಸ್ಟ್‌ನ ಟ್ರಸ್ಟಿ ಟಿ. ಅಶೋಕ್‌ ಪೈ ಅವರು ಬೆಟ್ಟು ಮಾಡಿದರು.

ಆಗ ವಿರೋಧ-ಕ್ರಮೇಣ ಅರ್ಥ
ಸಂಪಾದನೆಯಲ್ಲಿ ಉಳಿತಾಯ ಮಾಡಲು ಡಾ| ಟಿಎಂಎ ಪೈಯವರು ಪ್ರಚೋದಿಸಿದ್ದರು. ಆರೋಗ್ಯಕ್ಕಾಗಿ ಯೋಜನೆಯನ್ನು ಜಾರಿಗೊಳಿಸಿದರು. ಆಗ ನಾವೆಲ್ಲ ಇದಕ್ಕೆ ವಿರೋಧಿಸಿದ್ದೆವು. “ಹಾಗಲ್ಲ ಮಾಸ್ಟ್ರೆ’ ಎಂದು ಡಾ| ಪೈಯವರು ಹಿತವಚನ ಹೇಳಿದ್ದರು. ಆದರೆ ವಯಸ್ಸಾದ ಬಳಿಕ ಈಗ ಅದರ ಮೌಲ್ಯ ಅರ್ಥವಾಗುತ್ತಿದೆ ಎಂದು ವಿಶ್ರಾಂತ ಪ್ರಾಂಶುಪಾಲರಲ್ಲಿ ಹಿರಿಯರಾದ ಪ್ರೊ| ಶ್ರೀಶ ಆಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next