Advertisement

ಮೋದಿ ‘ದಾರಿಹೋಕ’ರಂತೆ ವರ್ತಿಸಿದ್ದಾರೆ : ಪ್ರಧಾನಿ ವಿರುದ್ಧ ಮಾಹುವಾ ಆಕ್ರೋಶ  

01:44 PM Apr 02, 2021 | Team Udayavani |

ಕೊಲ್ಕತ್ತಾ : ನಿನ್ನೆ(ಏಪ್ರಿಲ್ 1) ಪಶ್ಚಿಮ ಬಂಗಾಳದ ಅಲ್ಬೇರಿಯಾದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ದೀದಿ ಓ ದೀದಿ’ ಎಂದು ಮಮತಾ ಬ್ಯಾನರ್ಜಿಯವರನ್ನು ಅಪಹಾಸ್ಯ ಮಾಡಿದ್ದು ತೃಣಮೂಲ ಕಾಂಗ್ರೆಸ್ ನ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮೋದಿಯವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗದುಕೊಂಡ ತೃಣಮೂಲ ಕಾಂಗ್ರೆಸ್ ನ ಸಂಸದೆ ಮಾಹುವಾ ಮೊಯಿತ್ರಾ, ಮೋದಿಯವರು ದಾರಿಹೋಕರಂತೆ ವರ್ತಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ದಾರಿಹೋಕರು  ರಸ್ತೆ ಬದಿಗಳಲ್ಲಿನ ಗೋಡೆಯ ಮೇಲೆ ಕುಳಿತುಕೊಂಡು ನಡೆದಾಡುವ ಮಹಿಳೆಯರನ್ನು ದಿದಿ ಓ ದಿದಿ ಎಂದು ಕರೆದು ಚುಡಾಯಿಸುತ್ತಾರೆ. ಹಾಗೆಯೇ ಮೋದಿ ಮಾಡಿದ್ದಾರೆ ಎಂದು ಮಾಹುವಾ ಹೇಳಿದ್ದಾರೆ.

ಓದಿ : ಇದು ನಾಸಾದ ನೂತನ ತಂತ್ರಜ್ಞಾನ… ಗಾಳಿ ಇಲ್ಲದ ಟೈರುಗಳು…ಬಳಸುವಿರೇನು?

ಇದು, ಬೆದರಿಕೆ ಎಂದು ನಿಮಗನ್ನಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಹುವಾ, ಇದು ಹಾಗೆಯೇ ಕೇಳಿಸುವುದಿಲ್ಲವೇ..? ಅದು ಏನನ್ನು ಧ್ವನಿಸುತ್ತದೆ..? ಎಂದು ಅವರು ಪ್ರತಿ ಪ್ರಶ್ನೆ ಮಾಡಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಲಕ್ಷಾಂತರ ಮಂದಿ ಸೇರಿರುವ ದೊಡ್ಡ ಸಭೆಯಲ್ಲಿ ಹೀಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಪಹಾಸ್ಯ ಮಾಡುತ್ತಾರೆ. ನೀವು ಅದನ್ನು ಹೇಳುತ್ತೀರಾ..? ಅವರು, ಅವರ ತಾಯಿಗೆ ಹೀಗೆ ಹೇಳುತ್ತಾರಾ..? ಅವರ ಸಹೋದರಿಯರಿಗೆ ಹೀಗೆ ಹೇಳುತ್ತಾರಾ..? ಅವರಿಂದ ಬೇರ್ಪಟ್ಟ ಅವರ ಹೆಂಡತಿಗೆ ಹೀಗೆ ಹೇಳುತ್ತಾರಾ..? ಅದು ಯಾರಿಗಾದರೂ ಹೇಳುವಂತದ್ದಾ..? ಹೇಗೆ ಇದು ಒಪ್ಪಿತವಾಗುತ್ತದೆ..? ಹೀಗೆ ಮಾತನಾಡುವ ಪ್ರಧಾನಿ ನಮಗೆ ಸಮಾಜದಲ್ಲಿ ಹೇಗಿರಬೇಕೆಂದು ಪಾಠ ಮಾಡುತ್ತಾರಾ..? ಒಬ್ಬ ಮುಖ್ಯಮಂತ್ರಿಯನ್ನು ಅತ್ಯಂತ ಕೆಳಮಟ್ಟದಲ್ಲಿ ನಿಂದಿಸುವ ಪ್ರಧಾನ ಮಂತ್ರಿಯವರ ಧೋರಣೆ ಇದು ಎಂದು ಅವರು ಹೇಳಿದ್ದಾರೆ.

ಓದಿ : ಮ್ಯಾನ್ಮಾರ್ ನಿರಾಶ್ರಿತರನ್ನು ವಾಪಸ್ ಕಳುಹಿಸಬೇಡಿ : ಕೇಂದ್ರಕ್ಕೆ ಝೊರಾಮ್ ತಂಗ

ಇನ್ನು, ಅಲ್ಬೇರಿಯಾದಲ್ಲಿ ಮಾತನಾಡಿದ್ದ ಪ್ರಧಾನಿ, ಮುಖ್ಯಮಂತ್ರಿ ಬ್ಯಾನರ್ಜಿ ಅವರು ‘ನಾವೆಲ್ಲರೂ ಒಂದಾಗಬೇಕು’ ಎಂದು ಸೋನಿಯಾ ಗಾಂಧಿ ಸೇರಿ ಇತರ ಪ್ರತಿ ಪಕ್ಷಗಳ ಪ್ರಮುಖ ನಾಯಕರಿಗೆ ಪತ್ರ ಬರೆದ ವಿಚಾರವನ್ನು ಉಲ್ಲೇಖಿಸಿ, ‘ದೀದಿ ಅವರು ಮೋದಲ ಹಂತದ ಚುನಾವಣೆ ಮುಗಿದ ನಂತರ ಹತಾಶರಾಗಿದ್ದಾರೆ. ಸೋಲುವ ಭಯ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಪ್ರತಿಪಕ್ಷಗಳ ನಾಯಕರ ಬೆಂಬಲ ಯಾಚಿಸುತ್ತಿದ್ದಾರೆ. ದೀದಿ ನಿಮ್ಮ ನಡೆಗಳು ನಂದಿಗ್ರಾಮದಲ್ಲಿ ಸೋಲುವ ಭಯವನ್ನು ತೋರಿಸುತ್ತಿದೆ. “ದೀದಿ…ಓ…ದೀದಿ” …ನೀವು ಸೋಲುವ ಭಯದಿಂದ ಇನ್ನೊಂದು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತೀರಿ ಎಂಬ ಒಂದು ಸುದ್ದಿ ಹರಿದಾಡುತ್ತಿದೆ.. ಇದು ಸತ್ಯನಾ..?’ ಎಂದು ಕೇಳಿದ್ದರು.

ಮೋದಿಯವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಮಾಹುವಾ ತಮ್ಮ ವೈಯಕ್ತಿಕ ಟ್ವೀಟರ್ ಖಾತೆಯಲ್ಲಿ, ‘ಹೌದು ಮೋದಿಯವರೇ, ಅವರು ಸ್ಪರ್ಧಿಸುತ್ತಿದ್ದಾರೆ. ಅವರು ಸ್ಪರ್ಧಿಸುತ್ತಿರುವ ಕ್ಷೇತ್ರ ವಾರಣಾಸಿ. ಹಾಗಾಗಿ ನೀವು ನಿಮ್ಮ ರಕ್ಷಣಾ ಕವಚವನ್ನು ಪಡೆದುಕೊಳ್ಳಲು ತೆರಳಿ’ ಎಂದು ಬರೆದುಕೊಂಡಿದ್ದಾರೆ.

ಓದಿ :  ನನ್ನ ಗಮನಕ್ಕೆ ತರದೆ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ: ‘ಪತ್ರ’ವನ್ನು ಸಮರ್ಥಿಸಿಕೊಂಡ ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next