Advertisement

ಬೀದಿ ದೀಪದ ಕಂಬ ಬಿದ್ದು ಬಾಲಕಿ ಸಾವು

12:02 PM Aug 21, 2018 | |

ಬೆಂಗಳೂರು: ಉಕ್ಕಿನ ಬೀದಿ ದೀಪದ ಕಂಬ ಬಿದ್ದು 14 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾಡುಗೋಡಿಯಲ್ಲಿ ನಡೆದಿದೆ. ವರ್ತೂರು ನಿವಾಸಿ ಹರೀಶ್‌ ಮತ್ತು ವಿನುತಾ ದಂಪತಿ ಪುತ್ರಿ ಯುವರಾಣಿ (14) ಮೃತ ಬಾಲಕಿ.

Advertisement

ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಂದೆ ಹರೀಶ್‌ ಜತೆ ಶಿವನಾಪುರದಲ್ಲಿರುವ ಸಂಬಂಧಿಕರ ಮನೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬೈಕ್‌ನಲ್ಲಿ ತೆರಳಿ, ಮನೆಗೆ ವಾಪಸಾಗುವಾಗ ಘಟನೆ ನಡೆದಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಯುವರಾಣಿ ಹಾಗೂ ಆಕೆಯ ತಂದೆ ಇದ್ದ ಬೈಕ್‌, ಕಾಡುಗೋಡಿಯ ದಿನ್ನೂರು ಕ್ರಾಸ್‌ ಬಳಿ ಬಂದಾಗ ಲ್ಲೇ ಇದ್ದ ಬಳಕೆಯಲ್ಲಿಲ್ಲದ, ವಿದ್ಯುತ್‌ ಸಂಪರ್ಕವಿರದ ಕಬ್ಬಿಣದ ಬೀದಿ ದೀಪದ ಕಂಬ ಹರೀಶ್‌ ಹಾಗೂ ಯುವರಾಣಿ ಮೇಲೆ ಬಿದ್ದಿದ್ದೆ. ಪರಿಣಾಮ ಯುವರಾಣಿಯ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಘಟನೆಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಬಾಲಕಿಯ ಸಂಬಂಧಿ ರಾಜೇಂದ್ರ ಬಾಬು ಕಾಡುಗೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next