Advertisement
ಪಶು ಸಂಗೋಪನ ಇಲಾಖೆಯ ಅಧಿಕಾರಿಗಳು ಸಾಕು ನಾಯಿಗಳಿಗೆ ವ್ಯಾಪಕವಾಗಿ ರೇಬಿಸ್ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲಾದ್ಯಂತ ಹಮ್ಮಿಕೊಂಡಿದೆ. ಆದರೆ ಹಾಗೆಂದು ಜಿಲ್ಲೆಯಲ್ಲಿ ಹುಚ್ಚು ನಾಯಿಗಳೇ ಇಲ್ಲ ಅಂದಲ್ಲ; ಕಡಬದಲ್ಲಿ ಹುಚ್ಚು ನಾಯಿ ರೋಗದಿಂದ ಈ ವರ್ಷದಲ್ಲಿ ಎರಡು ದನಗಳು ಸಾವನ್ನಪ್ಪಿವೆ. ಈ ದನಗಳಿಗೆ ಕಡಿದ ಹುಚ್ಚು ನಾಯಿಗಳು ಯಾವುದೆಂದು ಪತ್ತೆಯಾಗಿಲ್ಲ.
Related Articles
Advertisement
ಜಿಲ್ಲೆಯಲ್ಲಿ 2017ರಲ್ಲಿ ಓರ್ವ, 2018ರಲ್ಲಿ ಓರ್ವ ವ್ಯಕ್ತಿ ರೇಬಿಸ್ಗೆ ಬಲಿಯಾ ಗಿದ್ದರು. ಆ ಬಳಿಕ ಇದುವರೆಗೆ ಎಲ್ಲಿಯೂ ಹುಚ್ಚು ನಾಯಿ ಕಡಿತದಿಂದ ಮನುಷ್ಯರು ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಇನ್ನು ಕಡಬದ ಪ್ರಕರಣದಲ್ಲಿ ದನಗಳನ್ನು ಗುಡ್ಡ ಅಥವಾ ಕಾಡಿಗೆ ಮೇಯಲು ಬಿಟ್ಟ ಸಂದರ್ಭ ಹುಚ್ಚು ನಾಯಿ ಕಚ್ಚಿ ಈ ರೋಗ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಹುಚ್ಚು ನಾಯಿ ರೋಗ ಜಿಲ್ಲೆಯಲ್ಲಿ ಇದೆ ಎನ್ನುವುದು ಖಾತರಿ. ರೇಬಿಸ್ನಿಂದ ಸಾಕು ನಾಯಿಗಳು, ಬೀದಿ ನಾಯಿಗಳು ಸತ್ತಿರುವ ಸಾಧ್ಯತೆ ಇದ್ದರೂ ಈ ಬಗ್ಗೆ ಅಂಕಿ ಅಂಶಗಳು ಲಭ್ಯವಿಲ್ಲ.
ರೇಬಿಸ್ ನಿರೋಧಕ ಲಸಿಕೆ ಹಾಕುವ ಸಂಘಟಿತ ಪ್ರಯತ್ನ ಇದುವರೆಗೆ ನಡೆದಿರಲಿಲ್ಲ; ಈ ವರ್ಷ (2020-21) ಅದು ನಡೆದಿದೆ. ನಾಯಿ ಸಾಕುವವರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಾಗಿದೆ. ಜಿ.ಪಂ.ನ ಅನುದಾನ ಪಡೆದು ಪ್ರತಿ ತಾಲೂಕಿನಲ್ಲಿ 10 ಕಡೆ ಶಿಬಿರಗಳನ್ನು ನಡೆಸಿ ಸಾಕು ನಾಯಿಗಳಿಗೆ ಲಸಿಕೆ ಹಾಕಲಾಗಿದೆ. -ಡಾ| ಪ್ರಸನ್ನ ಕುಮಾರ್ ಟಿ.ಜಿ., – ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ದ.ಕ.
-ಹಿಲರಿ ಕ್ರಾಸ್ತಾ