Advertisement

D.K.Shivakumar ಶಿಫಾರಸಿನಂತೆ ಮಾಡಿದ್ದ ಪಿಡಿಒಗಳ ವರ್ಗಾವಣೆಗೆ ತಡೆ

01:44 AM Aug 18, 2024 | Team Udayavani |

ರಾಮನಗರ: ಜಿಲ್ಲೆಯ 20 ಮಂದಿ ಪಿಡಿಒಗಳನ್ನು ವರ್ಗಾವಣೆ ಮಾಡಿ ಬೇರೆ ಪಂಚಾಯತ್‌ಗಳಿಗೆ ನಿಯೋಜನೆ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶಿಫಾರಸಿನ ಮೇರೆಗೆ ಜಿ.ಪಂ. ಸಿಇಒ ಹೊರಡಿಸಿದ್ದ ಆದೇಶಕ್ಕೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ತಡೆ ನೀಡಿದೆ.

Advertisement

ಆ. 14ರಂದು ಆದೇಶ ಹೊರಡಿಸಿದ್ದ ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ ಅವರು 13 ಮಂದಿ ಪಿಡಿಒಗಳ ವರ್ಗಾವಣೆ, 7 ಮಂದಿ ಗ್ರೇಡ್‌-1 ಕಾರ್ಯದರ್ಶಿ ಗಳನ್ನು ಪ್ರಭಾರ ಪಿಡಿಒಗಳಾಗಿ ನಿಯೋಜನೆ ಮಾಡಿದ್ದರು. ಪಿಡಿಒಗಳ ನೇಮಕ ಮತ್ತು ಶಿಸ್ತು ಪ್ರಾಧಿಕಾರದ ಮುಖ್ಯಸ್ಥರು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತ ರಾಗಿದ್ದು, ಪಿಡಿಒಗಳ ವರ್ಗಾವಣೆಗೆ ಇವರ ಅನುಮತಿ ಕಡ್ಡಾಯ. ಈ ನಿಯಮ ಪಾಲನೆ ಮಾಡದೆ ಏಕಾಏಕಿ ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ ಎಂದು ಇಲಾಖೆಯ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next