Advertisement

CAA ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ: ವಿಪಕ್ಷಗಳಿಗೆ ಬಿಜೆಪಿ

12:53 AM Mar 14, 2024 | Team Udayavani |

ಹೊಸದಿಲ್ಲಿ: ಸಿಎಎಗೆ ಸಂಬಂಧಿಸಿದಂತೆ ವಿಪಕ್ಷಗಳು ಸುಳ್ಳು ಸುದ್ದಿ ಹರಡು­ವುನ್ನು ನಿಲ್ಲಿಸಬೇಕು. ಸುಳ್ಳು ಹೇಳುವ ಮೂಲಕ ದೇಶದಲ್ಲಿ ಕೋಮುದ್ವೇಷ ಹರಡುತ್ತಿವೆ ಎಂದು ಬಿಜೆಪಿ ನಾಯಕರು ಬುಧ­ವಾರ ಆರೋಪಿಸಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿ­ವಾಲ್‌, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತ­ಪಡಿಸಿರುವ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ಸಿಎಎ ಯಾರದ್ದೇ ಪೌರತ್ವ ಮತ್ತು ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ ಎಂದರು.

Advertisement

ಬಂಗಾಲದಲ್ಲಿ ಬಂಧನ ಗೃಹ ಸ್ಥಾಪನೆ ಬೇಡ: ಮಮತಾ
ಕೋಲ್ಕತಾ: ವಲಸಿಗರನ್ನು ಇಡುವಂತಹ ಬಂಧನ ಗೃಹಗಳು ಸ್ಥಾಪನೆಯಾಗುವು ದನ್ನು ನಾವು ಬಯಸುವು ದಿಲ್ಲ. ಹೀಗಾಗಿ ಸಿಎಎಗೆ ವಿರೋಧಿಸುತ್ತಿದ್ದೇವೆ ಎಂದು ಸಿಎಂ ಮಮತಾ ಹೇಳಿದ್ದಾರೆ. ಸಿಎಎ ಎನ್‌ಆರ್‌ಸಿಗೆ ಸಂಬಂ ಧಿಸಿದೆ ಹೀಗಾಗಿ ವಿವರ ಪಡೆದು ಅವರನ್ನು ಬಂಧನ ಗೃಹಗಳಿಗೆ ತಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next