Advertisement

Agnipath ಯೋಜನೆ ನಿಲ್ಲಿಸಿ, ಸೇನೆ ಇಬ್ಭಾಗ ಸರಿ ಅಲ್ಲ: ಯೋಧನ ತಾಯಿ

11:47 PM Jul 09, 2024 | Team Udayavani |

ಲಕ್ನೋ: “ಸೇನೆಯನ್ನು ಇಬ್ಭಾಗ ಮಾಡುವುದು ಸರಿ ಅಲ್ಲ. ಎರಡೂ ಕೈಗಳನ್ನು ಜೋಡಿಸಿ ಕೇಂದ್ರದ ಬಳಿ ಮನವಿ ಮಾಡುತ್ತೇನೆ. ದಯವಿಟ್ಟು ಅಗ್ನಿಪಥ ಯೋಜನೆ ನಿಲ್ಲಿಸಿ’. ಹೀಗೆಂದು ಮೊನ್ನೆಯಷ್ಟೇ ಮರಣೋತ್ತರವಾಗಿ ಕೀರ್ತಿ ಚಕ್ರಕ್ಕೆ ಭಾಜನರಾದ ಹುತಾತ್ಮ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ರ ತಾಯಿ ಮಂಜು ಸಿಂಗ್‌ ಮನವಿ ಮಾಡಿದ್ದಾರೆ.

Advertisement

ಮಂಗಳವಾರ ರಾಯಬರೇಲಿಗೆ ಭೇಟಿ ನೀಡಿದ ವಿಪಕ್ಷ ನಾಯಕ ರಾಹುಲ್‌ ಗಾಂಧಿಯನ್ನು  ಅಂಶುಮಾನ್‌ ಕುಟುಂಬ ಭೇಟಿಯಾಗಿದೆ. ಆ ಬಳಿಕ ಮಾಧ್ಯಮ ಜತೆ  ಮಾತನಾಡಿದ ಅಂಶುಮಾನ್‌ ತಾಯಿ “ಅಗ್ನಿಪಥದ ಕುರಿತು ರಾಹುಲ್‌ ನಿಲುವು ಸರಿಯಾಗಿದೆ. ದಯವಿಟ್ಟು ಸರಕಾರ ಅದನ್ನು ಪರಿಗಣಿಸಬೇಕು. 4 ವರ್ಷಕ್ಕೆ ಯೋಧರನ್ನು ನೇಮಿಸಿಕೊಂಡರೆ ಬಳಿಕ ಅವರ ಭವಿಷ್ಯ ಅತಂತ್ರವಾಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next