Advertisement

ಛತ್ತೀಸ್‌ಗಢದಿಂದ ಬಿಜೆಪಿ ಉಚ್ಚಾಟನೆಗೆ ದೊಣ್ಣೆ-ಬುಲೆಟ್‌: ಕೈ ಶಾಸಕ

12:04 PM Apr 11, 2018 | Team Udayavani |

ಕೋರ್ಬಾ : ”ಛತ್ತೀಸ್‌ಗಢದಲ್ಲಿ ಅಧಿಕಾರರೂಢವಾಗಿರುವ ಭಾರತೀಯ ಜನತಾ ಪಕ್ಷವನ್ನು ಹೊಡೆದೋಡಿಸಲು ಅಗತ್ಯವಿದ್ದರೆ ದೊಣ್ಣೆ ಮತ್ತು ಬುಲೆಟ್‌ ಉಪಯೋಗಿಸಲು ಕೂಡ ನಾವು ಹಿಂಜರಿಯವುದಿಲ್ಲ” ಎಂದು ಕಾಂಗ್ರೆಸ್‌ ಶಾಸಕ ರಾಮದಯಾಳ್‌ ಉಯಿಕೆ ಹೇಳಿರುವ ಮಾತುಗಳು ಈಗ ವೈರಲ್‌ ಆಗಿವೆ; ವಿವಾದಕ್ಕೂ ಕಾರಣವಾಗಿವೆ. 

Advertisement

ಛತ್ತೀಸ್‌ಗಢದಲ್ಲಿ ಈ ವರ್ಷಾಂತ್ಯ ವಿಧಾನಸಭಾ ಚುನಾವಣೆಗಳು ನಡೆಯಲಿಕ್ಕಿವೆ. ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ  ಅಧಿಕಾರಕ್ಕೆ ತಂದೇ ತೀರುವೆವು ಎಂಬ ಶಪಥವನ್ನು ಪಕ್ಷದ ಕಾರ್ಯಕತರರಿಗೆ ಬೋಧಿಸುವ ಕಾರ್ಯಕ್ರಮ ಸಿಂಥಿಯಾ ಗ್ರಾಮಲ್ಲಿ ನಡೆದಿದ್ದಾಗ ಪಾಲಿತನಖರ್‌ ಕ್ಷೇತ್ರದ ಶಾಸಕರಾಗಿರುವ ಉಯಿಕೆ ಅವರು ಆಳುವ ಬಿಜೆಪಿಯನ್ನು ರಾಜ್ಯದಿಂದ ಹೊಡೆದೋಡಿಸಲು ದೊಣ್ಣೆ ಮತ್ತು ಬುಲೆಟ್‌ ಉಪಯೋಗಿಸುವ ಮಾತುಗಳನ್ನು ಆಡಿದರು. 

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ನ ಛತ್ತೀಸ್‌ಗಢ ವ್ಯವಹಾರಗಳ ಪ್ರಭಾರಿಯಾಗಿರುವ ಪಿ ಎಲ್‌ ಪುಣಿಯಾ ಅವರು, ಶಾಸಕ ಉಯಿಕೆ ಅವರು ಮಾತುಗಳನ್ನು ಸಮರ್ಥಿಸಿ “ಪ್ರಾಸಬದ್ಧತೆಗಾಗಿ ಉಯಿಕೆ ಅವರು  ದೊಣ್ಣೆ – ಬುಲೆಟ್‌ ಪದಪುಂಜವನ್ನು ಉಪಯೋಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next