Advertisement

Bridge: ಇದಕ್ಕೆ ಏನ್ ಹೇಳೋಣ… ಸೇತುವೆ ನಿರ್ಮಾಣ ಆದರೂ ಜೀವಕ್ಕೆ ಮಾತ್ರ ಅಪಾಯ ತಪ್ಪಿಲ್ಲ…

11:21 AM Jul 15, 2024 | Team Udayavani |

ಚಿಕ್ಕಮಗಳೂರು: ದೂರದಿಂದ ನೋಡಿದಾಗ ಸೇತುವೆ ಇದೆಯಲ್ಲಾ ಎಂದು ಸಂತಸ ಪಟ್ಟರೆ ಹತ್ತಿರ ಬಂದಾಗ ಗೊತ್ತಾಗುತ್ತದೆ ಇದರ ಅಸಲಿಯತ್ತು, ಈ ಸೇತುವೆಯಲ್ಲಿ ಹೋಗುವುದು ಎಂದರೆ ಜೀವ ಕೈಯಲ್ಲಿ ಹಿಡಿಕೊಂಡು ಹೋದ ಹಾಗೆ ಯಾಕೆಂದರೆ ಈ ಕಬ್ಬಿಣದ ಸೇತುವೆಯಲ್ಲಿ ನಡೆದಾಡಲು ಮರದ ಹಲಗೆಯೇ ಇಲ್ಲ, ಇದು ಕೊಪ್ಪ ತಾಲೂಕಿನ ಅತ್ತಿಕೂಡಿಗೆ, ಅಬ್ಬಿಕಲ್ಲು ಗ್ರಾಮದ ಜನರ ಗೋಳು.

Advertisement

ಈ ಕಬ್ಬಿಣದ ಸೇತುವೆ ಮೂರೂ ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಹಲಗೆ ಮಾತ್ರ ಇದುವರೆಗೂ ಹಾಕಲಿಲ್ಲ ಈ ಪ್ರದೇಶದ ಜನ ಸೇತುವೆಯಲ್ಲಿರುವ ಎರಡು ಎರಡು ಅಡಿ ಉದ್ದದ ಕಬ್ಬಿಣದ ಪಟ್ಟಿಯ ಮೇಲೆ ಕಾಲಿಟ್ಟು ಸಾಗಬೇಕು ಒಂದು ವೇಳೆ ಕಾಲು ಜಾರಿದರೆ ಕೆಳಗೆ ಕಲ್ಲುಬಂಡೆಗಳಿಂದ ಕೂಡಿದ ಸಣ್ಣ ಜಲಪಾತಕ್ಕೆ ಬೀಳಬೇಕು.

ಅಷ್ಟು ಮಾತ್ರವಲ್ಲದೆ ಮಳೆಗಾಲ ಆರಂಭವಾದಾಗ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ ಜೊತೆಗೆ ಪ್ರವಾಸಿಗರು ಇಲ್ಲಿಗೆ ಬಂದು ಈ ಅರ್ಧಂಬರ್ಧ ಸೇತುವೆ ಮೇಲೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ, ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Rakshit Shetty: ಅನುಮತಿಯಿಲ್ಲದೆ ಹಾಡು ಬಳಕೆ ಆರೋಪ; ರಕ್ಷಿತ್‌ ಶೆಟ್ಟಿ ವಿರುದ್ಧ FIR ದಾಖಲು

Advertisement

Udayavani is now on Telegram. Click here to join our channel and stay updated with the latest news.

Next