Advertisement
ವಿಜಯಪುರ-ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮೋದಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿ ಕೇಂದ್ರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಸ್ವತಂತ್ರ ಶಕ್ತಿ ಇಲ್ಲ. ಇದರ ಒಂದೊಂದು ಭಾಗವೂ ಒಬ್ಬೊಬ್ಬರ ಬಳಿ ಇವೆ. ಸ್ಟೇರಿಂಗ್ ಯಾರೋ ತಿರುಗಿಸಿದರೆ, ಇನ್ಯಾರೋಬ್ರೇಕ್ ಹಾಕುತ್ತಾರೆ. ಮತ್ಯಾರೋ ಗೇರ್ ಎಳೆಯುತ್ತಾರೆ, ಮತ್ತೂಬ್ಬರು ಹಾರ್ನ್ ಬಾರಿಸುತ್ತಾರೆ. ಮೈತ್ರಿ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಹಾಳಾಗಿದೆ ಎಂದರು.