Advertisement
ಬ್ರಿಸ್ಟಾಲ್ ಸಿಗರೇಟಿನ ಹೊಗೆಯ ನಶೆಯಿಂದ ತುಸು ಹೊರಬಂದ ಶೆಟ್ಟರ ಕಣ್ಣಿಗೆ ಧುತ್ತೆಂದು ಕಂಡವನು ಬಕ್ಕಾé. ಪಾಪ ಶೆಟ್ಟರಾದರೂ ಏನು ಮಾಡಿಯಾರು? ತಾವು ಊರಲ್ಲಿ ಇಲ್ಲ ಎಂದು ಬಂದವರಿಗೆ ಹೇಳು ಎಂದು ಕಿವಿಯೊಳಗೆ ತಿದಿಯೂದಿ ಅಂಗಡಿಯ ಮುಂದೆ ಕುಳ್ಳಿರಿಸಿದ್ದ ಗುಮಾಸ್ತ ಗಂಗ್ಯಾನ ಮಾತು ಕೇಳದೆ ಬಕ್ಕಾ ಹಟ್ಟಿಯೊಳಗ ಮರಿಯನ್ನು ಕಾಣಲು ರಭಸದಿ ನುಗ್ಗುವ ಕುರಿಯಂತೆ ನುಗ್ಗಿದ್ದ. ಬಂದಿರೋ ಬಕ್ಕಾ ಖಾಯಂ ಆಗಿ ಅವನು ಬೆಳೆದ ಮಾಸೀಲನನ್ನು ನನ್ನ ಅಂಗಡಿಗಲ್ಲದೆ ಬೇರೆ ಯಾರ ಅಂಗಡಿಗೂ ಹೊಡೆದಿಲ್ಲ. ಮಾಸೀಲು ಹೊಡೆದ ಮೇಲೂ ಲಾಭ ಅಂತ ಅವಾ ಒಂದೂ ನಯಾಪೈಸೆಯನ್ನು ಯಾವತ್ತೂ ತೆಗೆದುಕೊಂಡು ಹೋಗಿರಲಿಲ್ಲ. ಯಾಕೆಂದರೆ, ಮಾಸೀಲು ಶೆಟ್ರ ಅಂಗಡಿ ಮುಟ್ಟುವುದರೊಳಗಾಗಿ ಬಕ್ಕಾ ಆಗಾಗ ಬಂದು ಕಳೆ ಕಾಸಿಗೆಗೆ, ಆಳು-ಹೋಳಿಗೆ ಕೊಡಬೇಕು ಎಂದು ಹಣ ತೆಗೆದುಕೊಂಡು ಹೋಗುತ್ತಿದ್ದ. ಬಕ್ಕಾನ ಸಪ್ಪೆ ಮೋರೆ ನೋಡಿ ಶೆಟ್ಟರಿಗೆ ಅನಿಸಿತ್ತು. ಏನೋ ಹಣದ ದರ್ದು ಇರಬಹುದು. ಅದಕ್ಕಾಗಿ ಬಕ್ಕಾé ಬಂದಿರಬಹುದು ಎಂದು ಊಹಿಸಿಕೊಂಡರು ಶೆಟ್ಟರು. ಶೆಟ್ಟರ ಊಹೆ ನಿಜವಾಗಿತ್ತು. ಪಾಪ ! ಬಕ್ಕಾ$Âನ ಬಗ್ಗೆ ಶೆಟ್ಟರಿಗೆ ಒಂದಿಷ್ಟು ಕನಿಕರ ಹುಟ್ಟಿತಾದರೂ ಏನು ಮಾಡೋದು ನೋಟು ಬ್ಯಾನ್ ಬಿಸಿ ಶೆಟ್ಟರಿಗೂ ತಟ್ಟಿ , ವ್ಯಾಪಾರ ಇಲೆª ನೊಣ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕಂದ್ರ ಶೆಟ್ರಾ ದಂಧೆ ಮಾಡುತ್ತಿದ್ದಿದ್ದೆ ನಂಬರ್ ದೋನಲ್ಲಿ. ಈಗ ಅದೆಲ್ಲದಕ್ಕೂ ಫುಲ್ಸ್ಟಾಪ್ ಬಿದ್ದು ಶೆಟ್ಟರ ಟೋಪಿ ಉಲ್ಟಾ ಹಾಕಿಕೊಳ್ಳೋ ಪರಿಸ್ಥಿತಿ ಬಂದಿತ್ತು. ಅದೆಲ್ಲವನ್ನು ನೆನೆದು ಶೆಟ್ಟರು ನಿಟ್ಟುಸಿರು ಹಾಕುತ್ತಾ ತಾವೇ ಮೌನ ಮುರಿದು ಬಕ್ಕಾನನ್ನು ಮಾತನಾಡಿಸಿದರು. “”ಏನಪಾ ಬಕ್ಯಾ ಇಷ್ಟ್ ಬಿಸಲೊತ್ತಿನ್ಯಾಗ ಪ್ಯಾಟಿಗೆ ಬಂದೀದೆಲ್ಲಾ? ಏನ್ ಇಸೇಸ” ಎಂದು ಪ್ರಶ್ನಿಸಿದರು. ಶೆಟ್ಟರು ಮಾತನಾಡಿಸಿದ್ದರಿಂದ ಬಕ್ಯಾನ ಮುಖ ಹಿಗ್ಗಿ ಹಿರೇಕಾಯಿಯಂತಾಯಿತು. ಹೆಗಲ ಮೇಲಿದ್ದ ಕಮಟು ವಾಸನೆಯ ಶಲ್ಯ ತೆಗೆದು ಮುಖ ಒರೆಸಿಕೊಳ್ಳುತ್ತ ಶೆಟ್ಟರ ಮುಂದೆ ತನ್ನ ಬಿನ್ನಹದ ಪೀಠಿಕೆ ಹಾಕಿದ. “”ಏನಿಲ್ಲ ಸಾವಾRರ್ರೆ, ಹಿರಿಮಗಳು ಉಲ್ಲವ್ವ ಎಲ್ಡನೆ ಹೆರಿಗಿಗೆ ಬಂದಾಳ. ನಿನ್ನೆ ರಾತ್ರಿಯಿಂದ ಒಂದೆ ಸಮನೆ ಬ್ಯಾನಿ ತಿನ್ನಾಕತ್ಯಾಳ. ಇನ್ನ ಸಣ್ಣ ಮಗ ಈರ್ಯಾನ ಪರೀಕ್ಷೆ ಪೀಜು ಕಟೆºàಕು. ನನ್ ಹತ್ರ ನಯಾಪೈಸೆ ಇಲ್ಲ. ನಮ್ ಕಷ್ಟಕಾಲ್ದಾಗೆ ಕೈ ಹಿಡಿಯೋರು ನೀವೆ ಅಲ್ವಾ? ನಿಮ್ಮತ್ರ ಅಲೆª ನಾನು ಯಾರ ಬಳಿನೂ ಯವಾರ ಇಟ್ಕಂಡಿಲ್ಲ. ಅದ್ಕ ಒಂದ್ ಹತ್ ಸಾವ್ರ ರುಪಾಯಿ ಸಾಲ ಇಸ್ಕಂಡ್ ಹೋಗೋಣ ಅಂತ ಬಂದೆ ರೀ ಯಪ್ಪಾ” ಎಂದು ಹೇಳಿ ತನ್ನ ಮಾತಿಗೆ ಬಕ್ಕಾ ವಿರಾಮ ಹಾಕಿದ. ಬಕ್ಕಾನ ಬಿನ್ನಹ ಕೇಳಿದ ಶೆಟ್ಟರಿಗೆ ಸೇದಿದ್ದ ಬ್ರಿಸ್ಟಾಲ್ ಸಿಗರೇಟಿನ ಎಲ್ಲ ಗುಂಗು ಇಳಿದು ಹೋಯ್ತು. ಬಕ್ಕಾ ಬಂದ್ ಸಾಲ ಕೇಳಿದಾಗ ಖಾಯಂ ಗಿರಾಕಿ, ನಂಬಿಕಸ್ಥ ಮನಷ್ಯ ಅಂತ ಇಲ್ಲ ಅನೆª ಐದ್ ಸಾವ್ರ ಕೇಳಿದ್ರೆ ಎರಡು ಸಾವ್ರಾನಾದ್ರೂ ಕೊಟ್ ಕಳಿಸ್ತಿದ್ರು ಶೆಟ್ರಾ. ಈಗ ನೋಟ್ ಬ್ಯಾನ್ ಆದ್ಮೇಲೆ ಶೆಟ್ಟರ ಬಳಿ ಹಣ ಇದ್ದರೂ ಅದಕ್ಕೆ ಬೆಲೆ ಇಲ್ಲದಂಗಾಗಿತ್ತು. ಹತ್ತು ರೂಪಾಯಿ ಯಾರಿಗಾದ್ರೂ ಕೊಟ್ರೂ ಅದರ ಲೆಕ್ಕ ಬರೆದುಕೊಳ್ಳುವಂಥ ಜರೂರತ್ತು ಸನ್ನಿವೇಶ ಬಂದೊದಗಿತ್ತು. ಹೀಗಾಗಿ, ಶೆಟ್ರಾ ಬಕ್ಕಾ ಕೇಳಿದ ಹಣದ ಬಗ್ಗೆ ಯೋಚೆ° ಮಾಡುವಂತೆ ಮಾಡಿತು.
Related Articles
Advertisement
ಇತ್ತ ಇರುವ ಎರಡು ಎಕರೆಯಲಿ ಬಕ್ಯಾ ಬೆಳೆದಿದ್ದ ಮೆಕ್ಕೆಜೋಳ ಕಟಾವಿಗೆ ಬಂದಿತ್ತು. ಮಳೆ ಕೈಕೊಟ್ಟರೂ ನಾಕಾಣೆ ಹಿಸ್ಸೆಯಂತೆ ನೀರು ಪಡೆದುಕೊಂಡು ಮೆಕ್ಕೆ ಜೋಳ ಬೆಳದಿದ್ದ. ಮೆಕ್ಕೆಜೋಳ ಬೀಜ, ಗೊಬ್ಬರ, ಆಳು ಅಂತ ಆಗಾಲೇ ಶೆಟ್ರ ದಲಾಲಿ ಅಂಗಡಿಯೊಳಗ ಸಾಲ ಮಾಡಿದ್ದ. ಬರುವ ಪೀಕಿನಲ್ಲಿ ಸಾಲ ತೀರಿಸಿದರಾಯ್ತು ಎಂಬ ಅಗಾಧ ನಂಬಿಕೆಯಲಿ. ಇವನ ದುರಾದೃಷ್ಟವೋ ಏನೋ ಮಳೆಯಾಗಲೇ ಇಲ್ಲ. ಬಿತ್ತಿದ ಬೆಳೆಯನ್ನಾದರೂ ಉಳಿಸಿಕೊಳ್ಳೋದಕ್ಕೆ ಪಿಂಜಾರ ಫಕ್ರಪ್ಪನ ಬೋರ್ನಿಂದ ನಾಕಾಣೆ ಹಿಸ್ಸೆ ಮಾತಾಡಿ ಬೆಳೆಗೆ ನೀರು ಹರಿಸಿದ್ದ. ಬೆಳೆ ಕಟಾವಿಗೆ ಬಂದ ವ್ಯಾಳೆಯೊಳಗ ಮಗಳನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೊಡು ಹೋಗಿದ್ದ. ಮನೇಲಿದ್ದ ಮಗ ಈರ್ಯಾನಿಗೆ ತನ್ನಕ್ಕ ಉಲ್ಲವ್ವ ಡಿಲೇವರಿ ಸರಾಳಾಗೇತಿ ಅಂತ ಯಾರೋ ಪ್ಯಾಟಿಯಿಂದ ಬಂದವರು ವಾರ್ತೆ ಹೇಳಿದ್ದರು. ಇದರಿಂದ ಈರ್ಯಾನೂ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟ. ಅಪ್ಪ ಬರುವುದರೊಳಗಾಗಿ ಆಳು ಕರಕೊಂಡು ಮೆಕ್ಕೆಜೋಳ ಮುರಿಸೋಣ ಎಂದುಕೊಂಡು ಆಳಿನೊಂದಿಗೆ ಬೆರೆತು ಈರ್ಯಾ ಮೆಕ್ಕೆಜೋಳ ಮುರಿಸಿದ. ರಾಶಿ ಮಾಡಿದ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ಪ್ಯಾಟಿಗೆ ಹೋದವರ ಕೈಲಿ ಅಪ್ಪನಿಗೆ ತಿಳಿಸುವಂತೆ ಹೇಳಿದ್ದ. ಹೇಗೋ ಮಗ ಜಬಾದಾರಿ ತಗೋಂಡ್ ಮಾಡಕತ್ಯಾನ ಅಂತ ಬಕ್ಕಾ ನಿರುಮ್ಮಳನಾದ. ಹೆರಿಗೆಯಾದ ಮಗಳನ್ನು ಕರೆದುಕೊಂಡು ಬಕ್ಕಾ ಮನೆಗೆ ಬಂದ. ಬಂದವನೇ ಸೀದಾ ಹೊಲದ ಕಡೆ ಹೆಜ್ಜೆ ಹಾಕಿದ. ಅಷ್ಟೊತ್ತಿಗಾಗಲೇ ಮಗ ಈರ್ಯಾ ಮೆಕ್ಕೆಜೋಳ ರಾಶಿ ಮಾಡಿ ಪ್ಯಾಟಿಗೆ ಹೋಗಾಕ ರೆಡಿ ಮಾಡಿದ್ದ. ಪ್ಯಾಟಿಗೆ ಹೋಗಿ ಶೆಟ್ಟರ ದಲಾಲಿ ಅಂಗಡಿಯಲ್ಲಿ ತೂಕ ಹಾಕಿಸಿ ಲೆಕ್ಕ ಮಾಡಿಸಿಕೊಂಡು ಬರೋದು ಈರ್ಯಾನಿಗೆ ಗೊತ್ತಿರಲಿಲ್ಲ. ಮಾತಿನಂತೆ ಬಕ್ಕಾ ಪಿಂಜಾರ ಫಕ್ರಪ್ಪನಿಗೆ ಸೇರಬೇಕಾಗಿದ್ದ ನಾಕಾಣೆ ಭಾಗದ ಮೆಕ್ಕೆಜೋಳವನ್ನು ಅಲ್ಲಿಯೇ ಬಿಟ್ಟು ಬಂಡಿಯಲ್ಲಿ ಹೇರಿಕೊಂಡು ಪ್ಯಾಟಿಗೆ ಹೊಂಟು ನಿಂತ. ಬಕ್ಕಾನಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದ ಎತ್ತುಗಳು ಬಂಡಿಯನ್ನು ಎಳೆದುಕೊಂಡು ಶೆಟ್ಟರ ದಲಾಲಿ ಅಂಗಡಿ ಮುಂದ ಬಂದು ನಿಂತವು. ತಂದಿದ್ದ ಮಾಸೀಲನ್ನು ಶೆಟ್ಟರ ಅಂಗಡಿಯೊಳಗ ನಿಟ್ಟು ಒಟ್ಟಿದ. ಬೆವರು ಒರೆಸಿಕೊಳ್ಳುತ್ತಾ “”ಸಾವಾರ್ರೆ ಮಾಸೀಲ್ ತಂದು ಹಚ್ಚಿನ್ರಿ. ನಾಳೆ ಬೇಸ್ತವಾರ. ನಾಳೆ ಸವಾಲ್ ಆಗುತ್ತ. ಅದಕ ಈಗ ದುಡ್ ಕೊಡ್ರಿ. ಮನೇಲಿ ಡಿಲೇವರಿ ಆದ ಮಗಳದಾಳ. ಆಕೀಗೆ ಬಾಣೆತನ ವೆಚ್ಚ ಒಯೆºàಕು” ಎಂದು ಶೆಟ್ರ ಮುಂದ ಹಲ್ಲುಗಿಂಜಿದ. ಅದ್ಕ ಶೆಟ್ರಾ “”ನೋಡು ಬಕ್ಕಾ ನೋಟ್ ಬ್ಯಾನ್ ಆದ್ಮೇಲೆ ನಮ್ ಆಟನ ನಿಂತ್ ಹೋಗೇತಿ. ಬ್ಯಾಂಕ್ ಎಟಿಎಂಗಳ ಮುಂದ ನಿಂತ್ ಸಾಕಾಗೇತಿ. ಈಗ ಬರೀ ಎಲ್ಡ ಸಾವ್ರ ರೊಕ್ಕ ತಕ್ಕೋಬೋದು. ನನ್ ಹತ್ರ ರೊಕ್ಕಾನ ಇಲ್ಲ. ಅದಲ್ದ ನೀ ತಂದಿರೋ ಮಾಲ್ ವ್ಯಾಪಾರ ಆದ್ರೂ ಅದ್ರಾಗ ನೀನ ನನಗ ಇನ್ನೂ ಸಾಲಗಾರ ಆಗ್ತಿ. ಅದ್ಕ ರೊಕ್ಕ ಇಲ್ಲ” ಎಂದು ಶೆಟ್ರಾ ಖಂಡಾತುಂಡವಾಗಿ ಹೇಳಿದರು. ಶೆಟ್ರ ಬಾಯಿಂದ ಇಷ್ಟೊಂದು ಕಠೊರವಾದ ಮಾತನ್ನು ಯಾವತ್ತೂ ಕೇಳಿರದ ಬಕ್ಕಾ ತನ್ನನ್ನು ತಾನೇ ನಂಬದಂತಾದ. ಅಷ್ಟರಲ್ಲಿ ಶೆಟ್ರಾ ಅದೇ ತಮ್ಮ ಖಾಯಂ ಬ್ರಾಂಡ್ ಬ್ರಿಸ್ಟಾಲ್ ಸಿಗರೇಟನ್ನು ತುಟಿಗೆ ಅಂಟಿಸಿಕೊಂಡು ಹೊರಟು ಹೋಗಿದ್ದರು. ವಾಸ್ತವಕ್ಕೆ ಬಂದ ಬಕ್ಕಾ ಹೆಗಲ ಮೇಲಿದ್ದ ಟವಲ್ ಕೊಡವಿಕೊಂಡು ತನ್ನ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳ ಬಳಿ ಬಂದು ಕಣ್ಣಿರು ಹಾಕಿದ. ಇದು ಈ ದೇಶದ ಅನ್ನದಾತನ ಸ್ಥಿತಿ ನೋಡು ಬಸವಣ್ಣ ಎಂದು ತನ್ನದೆ ಆದ ಶೈಲಿಯಲಿ ಬಕ್ಕಾ ಬಸವನ ಮುಂದೆ ಬಡಬಡಿಸಿದ. ಆದರೆ, ಬಕ್ಕಾ ತೋಡಿಕೊಳ್ಳುತ್ತಿದ್ದ ಸಂಕಟವನ್ನು ತಮ್ಮದೇ ಭಾವದಲ್ಲಿ ಅರ್ಥ ಮಾಡಿಕೊಂಡಿರುವಂತೆ ಬಡಕಲು ದೇಹದ ಆ ಎತ್ತುಗಳು ಮೆಕ್ಕೆಜೋಳ ಹೇರಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಿದ್ದ ಅದೇ ಮೆಕ್ಕೆಜೋಳದ ರವದಿಯನ್ನು ತಿಂದಿದ್ದನ್ನೇ ಮತ್ತೆ ಮರಳಿಸಿ ಬಾಯಿಗೆ ತಂದುಕೊಂಡು ಮೆಲುಕು ಹಾಕಿದವು. ಕಷ್ಟಪಟ್ಟು ದುಡಿಯುವ ನನಗೆ, ನಿನ್ನ ಜೊತೆ ಇರುವ ನನಗೆ ಇದೇ ಸ್ಥಿತಿ ಎಂದು ಮೆಲುಕು ಹಾಕುತ್ತಿದ್ದ ಬಡಕಲು ದೇಹದ ಆ ಎತ್ತುಗಳು ಹೇಳಿದಂತಿತ್ತು.
ಮೌನೇಶ್ ಎಸ್. ಬಡಿಗೇರ್