Advertisement

ಹಳ್ಳಿಗಾಡಿನ ಸೇವೆಗೆ ಕೋಟಾ ಕೃಪೆ ; ವೈದ್ಯಕೀಯ ಸ್ನಾತಕೋತ್ತರ ಪ್ರವೇಶ: ಸುಪ್ರೀಂ ಮಹತ್ವದ ಆದೇಶ

12:55 AM Sep 01, 2020 | Hari Prasad |

ಹೊಸದಿಲ್ಲಿ: ಗ್ರಾಮೀಣ, ಗುಡ್ಡಗಾಡು ಮತ್ತು ದುರ್ಗಮ ಪ್ರಾಂತಗಳಲ್ಲಿ ಸೇವೆ ಸಲ್ಲಿಸಿದ ಎಂಬಿಬಿಎಸ್‌ ವೈದ್ಯರಿಗೆ ವೈದ್ಯಕೀಯ ಸ್ನಾತಕೋತ್ತರ ಪ್ರವೇಶದಲ್ಲಿ ಮೀಸಲಾತಿ ಕಲ್ಪಿಸಲು ಸು. ಕೋರ್ಟ್‌ ಸಮ್ಮತಿಸಿದೆ.

Advertisement

ಕೋಟಾ ಕುರಿತಂತೆ ಹಲವಾರು ವೈದ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಈ ರೀತಿ ಕೋಟಾ ನಿಗದಿ ಕಾನೂನು ಬಾಹಿರವಲ್ಲ. ಹಾಗಾಗಿ ರಾಜ್ಯ ಸರಕಾರಗಳು ಈ ಕೋಟಾ ನಿರ್ಧರಿಸಬಹುದು.

ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಈ ಕೋಟಾ ನಿಗದಿಪಡಿಸಲು ಸಾಂವಿಧಾನಿಕ ಅಧಿಕಾರ ಇಲ್ಲವಾದರೆ ರಾಜ್ಯ ಸರಕಾರಗಳು ತಮ್ಮ ಸ್ವ ವಿವೇಚನೆಯ ಮೇರೆಗೆ ನಿಗದಿಪಡಿಸಬಹುದು.

ಈ ತೀರ್ಪು ಈಗಾಗಲೇ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ, ಮುಂದೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ ಎಂದಿದೆ.

ಕೆಲವು ರಾಜ್ಯಗಳು ಇಂಥ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಉಚಿತ ಅಂಕ ನೀಡುತ್ತಿರುವುದು ಔಚಿತ್ಯಪೂರ್ಣ ಎಂದೂ ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next