Advertisement

ಇಸ್ಲಾಂ ವಿರುದ್ಧ ಹೇಳಿಕೆ: ಶಿಕ್ಷೆಗೆ ಆಗ್ರಹ

11:42 AM Jun 11, 2022 | Team Udayavani |

ವಾಡಿ: ಇಸ್ಲಾಂ ಧರ್ಮಗುರು ಪ್ರವಾದಿ ಮಹ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಬಿಜೆಪಿ ಮುಖಂಡರಾದ ನೂಪುರ್‌ ಶರ್ಮಾ, ರಾಜಾ ಸಿಂಗ್‌ ಹಾಗೂ ನವೀನ್‌ ಜಿಂದಾಲ್‌ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್‌ ಫ್ರಂಟ್‌ ಸಂಘಟನೆ ಆಗ್ರಹಿಸಿದೆ.

Advertisement

ಈ ಕುರಿತು ಪೊಲೀಸ್‌ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಯುನೈಟೆಡ್‌ ಫ್ರಂಟ್‌ ಸಂಘಟನೆ ಅಧ್ಯಕ್ಷ ಝಹೂರ್‌ ಖಾನ್‌, ದೇಶದಲ್ಲಿ ಇಸ್ಮಾಂ ವಿರುದ್ಧ ಮಾತನಾಡುವರರ ಸಂಖ್ಯೆ ಹೆಚ್ಚಾಗುತ್ತಿದೆ. ಧರ್ಮ ಗುರುಗಳನ್ನು ಅವಮಾನಿಸುವ ಮತ್ತು ಇಸ್ಮಾಂ ಧರ್ಮ ಸಂಸ್ಕೃತಿಯನ್ನು ಪ್ರಶ್ನಿಸುವ ಮನಸ್ಥಿತಿಗಳು ಸಮಾಜದಲ್ಲಿ ಕೋಮು ದ್ವೇಷ ಹುಟ್ಟುಹಾಕುತ್ತಿವೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಕಾರಣಕ್ಕೆ ಪ್ರಶ್ನೆ ಮಾಡುವ ಭರದಲ್ಲಿ ಧರ್ಮದ ಕುರಿತು ಅವಹೇಳನಕಾರಿ ನುಡಿಗಳನ್ನು ವ್ಯಕ್ತಪಡಿ ಸುವುದು ಜನರ ನಂಬಿಕೆಗಳನ್ನೇ ಅವಮಾನಿಸಿದಂತಾಗುತ್ತದೆ. ಹೀಗೆ ಅವಮಾನಿಸಿದವರನ್ನು ಶಿಕ್ಷಿಸದೇ ಬಿಟ್ಟರೆ ಮುಂದೊಂದು ದಿನ ದೊಡ್ಡ ಪ್ರತಿಭಟನೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುನೈಟೆಡ್‌ ಫ್ರಂಟ್‌ ಅಧ್ಯಕ್ಷ ಝಹೂರ್‌ ಖಾನ್‌, ಪ್ರಧಾನ ಕಾರ್ಯದರ್ಶಿ ಉಮೇರ್‌ ಜುನೈದಿ, ಎಂ.ಡಿ.ಜುಬೇಲ್‌, ಮಹ್ಮದ್‌ ಮಝರ್‌, ಮಹ್ಮದ್‌ ರಫೀಕ್‌, ಅಜ್ಮತ್‌ ಪಟೇಲ್‌, ಯೂಸೂಫ್‌ ಕೊಡಜ್ಜಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next