Advertisement

ಅಧಿಕಾರ ಇಲ್ಲದೆ ಇದ್ದರೂ ಜ‌ನ ಆಶೀರ್ವಾದ ಮಾಡಿದ್ದಾರೆ: ಜನ್ಮದಿನದಂದು ಬಿಎಸ್‍ವೈ

12:34 PM Feb 27, 2022 | Team Udayavani |

ಬೆಂಗಳೂರು: ಅಧಿಕಾರ ಇಲ್ಲದೆ ಇದ್ದರೂ ಜ‌ನ ಆಶೀರ್ವಾದ ಮಾಡಿದ್ದಾರೆ, ಮತ್ತೊಮ್ಮೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ, ಕಾಂಗ್ರೆಸ್ ನವರ ಯಾವುದೇ ಬೂಟಾಟಿಕೆ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Advertisement

ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ತರಲು ಶಕ್ತಿಮೀರಿ ಕೆಲಸ ಮಾಡುತ್ತೇನೆ. ಜನ ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡುತ್ತಾರೆ. ವಿಧಾನಸಭೆ ಅಧಿವೇಶನ ಬಳಿಕ ರಾಜ್ಯ ಪ್ರವಾಸ ಆರಂಭ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಯಡಿಯೂರಪ್ಪ 79 ನೇ ಜನ್ಮ ದಿನಾಚರಣೆ:ವಿಶೇಷ ಪೂಜೆ, ರೈತ ಪರ ಕಾಳಜಿ

ಈ ವೇಳೆ ರಷ್ಯಾ – ಉಕ್ರೇನ್ ಯುದ್ಧ ವಿಚಾರವಾಗಿ ಮಾತನಾಡಿ, ಭಾರತೀಯರನ್ನು ಕರೆತರುವ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ನಿಂದ ಎಲ್ಲ ವಿದ್ಯಾರ್ಥಿಗಳು ಮರಳಿ ಬರುತ್ತಿದ್ದಾರೆ. ಯಾರೂ ಗಾಬರಿ ಪಡಬೇಡಿ, ತೊಂದರೆ ಆಗದಂತೆ ಕರೆತರುತ್ತೇವೆ. ಮೋದಿಜೀ ಅವರು ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದಾರೆ ಎಂದರು.

ಯಾರೂ ಅತಂಕ ಪಡೆದೆ ಇರಲು ಮನವಿ ಮಾಡುತ್ತೇನೆ. ಪೋಷಕರು ಯಾವುದೇ ರೀತಿ ಆತಂಕ ಪಡಬೇಡಿ. ಉಕ್ರೇನ್‍ನಲ್ಲಿ ಉಳಿದ ಭಾರತೀಯರು ಕೂಡಾ ಗಾಬರಿ ಪಡಬೇಡಿ ಎಂದರು.

Advertisement

ಈಗಾಗಲೇ 219 ವಿದ್ಯಾರ್ಥಿಗಳು ತಾಯಿ ನಾಡಿಗೆ ಮರಳಿ ಬಂದಿದ್ದಾರೆ. ಉಕ್ರೇನ್‍ನಲ್ಲಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಕೂಡ ಶಕ್ತಿ ಮೀರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next