Advertisement

ಸುಪ್ರೀಂ ತೀರ್ಪಿನ ಮೇಲೆ ರಾಜ್ಯ ರಾಜಕಾರಣ ನಿರ್ಧಾರ

11:15 PM Nov 12, 2019 | Team Udayavani |

ಹುಬ್ಬಳ್ಳಿ: ಅನರ್ಹ ಶಾಸಕರ ಕುರಿತಾಗಿ ನ.13ರಂದು ಸುಪ್ರೀಂಕೋರ್ಟ್‌ ನೀಡುವ ತೀರ್ಪು ರಾಜ್ಯ ರಾಜಕಾರಣವನ್ನು ನಿರ್ಧರಿಸಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರ ಗಮನ ಸುಪ್ರೀಂಕೋರ್ಟ್‌ ತೀರ್ಪಿನತ್ತ ಕೇಂದ್ರೀಕೃತವಾಗಿದೆ. ತೀರ್ಪು ಬಂದ ನಂತರ ಯಾವ ನಿರ್ಧಾರ ಕೈಗೊಳ್ಳಬೇಕೆಂಬ ಕುರಿತು ಚಿಂತಿಸಲಾಗುವುದು.

Advertisement

ಪಕ್ಷದಲ್ಲಿರುವ ಪ್ರಾಮಾಣಿಕರಿಗೆ ಒಳ್ಳೆಯ ಭವಿಷ್ಯವಿದೆ. ವಿನಾಕಾರಣ ಆತುರದ ನಿರ್ಧಾರ ಕೈಗೊಂಡರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು. ರಾಜಕಾರಣದಲ್ಲಿ ದುಡುಕಿನ ನಿರ್ಧಾರದಿಂದಲೇ ಅವಘಡಗಳು ಸಂಭವಿಸುತ್ತವೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಹೆಚ್ಚು ಅವಕಾಶವಿದೆ. ಆದರೆ ತಾತ್ವಿಕ ವಿರೋಧಿಯಾಗಿರುವ ಪಕ್ಷಗಳೊಂದಿಗೆ ಅಧಿಕಾರಕ್ಕಾಗಿ ಶಿವಸೇನೆ ಕೈ ಜೋಡಿಸಿರುವುದು ವಿಪರ್ಯಾಸ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next