Advertisement

ರಾಜ್ಯ ಮಟ್ಟದ ಚೆಸ್ ಚಾಂಪಿಯನ್‌ ಸ್ಪರ್ಧೆ ಫಲಿತಾಂಶ: ಆರ್ಯನ್ ಚೇತನ ಆನಂದ್ ಪ್ರಥಮ..

07:54 PM Aug 25, 2019 | mahesh |

ಚಿಕ್ಕಬಳ್ಳಾಪುರ: ನಗರದ ಪ್ರತಿಷ್ಟಿತ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ 11 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದ ರಾಜ್ಯ ಮಟ್ಟದ ಚೆಸ್ ಚಾಂಪಿಯನ್ ಸ್ಪರ್ಧೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.

Advertisement

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯ ಆರ್ಯನ್ ಚೇತನ ಆನಂದ್, ದ್ವೀತಿಯ ಸ್ಥಾನವನ್ನು ಬೆಂಗಳೂರಿನ ಬೆಮೆಲ್ ನ ಶಶಿಕೈ ಶಾಲೆಯ ವಿದ್ಯಾರ್ಥಿನಿ ಅಪೂರ್ವ ಕಾಂಬ್ಲೆ, ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಲೂಟ್ ಸೆಂಟ್ರಲ್ ಶಾಲೆಯ ಶ್ರೀಯಾನ ಎಸ್.ಮಲ್ಯ ಪ್ರಥಮ, ದ್ವೀತಿಯ ಸ್ಥಾನವನ್ನು ಮಂಡ್ಯದ ಶಾಂತಮ್ ಶಾಲೆಯ ಶಿಪಾಲಿ ಪಡೆದುಕೊಂಡಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಶ್ರೀ, ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ ಮತ್ತಿತರರು ನಗದು, ಅಭಿನಂಧನಾ ಪತ್ರ, ಫಲಕ ಸೇರಿ ಬಹುಮಾನ ವಿತರಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಕ್ಕೂ ಹೆಚ್ವು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next