Advertisement

Congress ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಿ: ಅಶೋಕ್‌

12:08 AM Jun 30, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಕೂಡಲೇ ಬಿಬಿಎಂಪಿ, ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳನ್ನು ನಡೆಸಲಿ ಎಂದು ವಿಪಕ್ಷದ ನಾಯಕ ಆರ್‌. ಅಶೋಕ್‌ ಅವರು ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಸವಾಲು ಹಾಕಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಧೈರ್ಯ ಕಳೆದುಕೊಂಡಿದೆ. ಸರಕಾರ ಸಂಪೂರ್ಣ ಪಾಪರ್‌ ಆಗಿದೆ. ರೈತರಿಗೆ 9 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. 50 ಎಂಎಲ್‌ ಹಾಲು ಹೆಚ್ಚಿಗೆ ಕೊಡಿ ಎಂದು ಯಾರಾದರೂ ಅರ್ಜಿ ಹಾಕಿದ್ದಾರಾ? ಎಂದು ಹಾಲಿನ ದರ ಹೆಚ್ಚಿಸಿರುವ ಸರಕಾರದ ಕ್ರಮವನ್ನು ಅಶೋಕ್‌ ತರಾಟೆಗೆ ತೆಗೆದುಕೊಂಡರು. ಮುದ್ರಾಂಕ ಶುಲ್ಕ ಹೆಚ್ಚಳ, ಮಾರ್ಗಸೂಚಿ ದರ, ಪೆಟ್ರೋಲ್‌, ಡೀಸೆಲ್‌, ಮದ್ಯ, ಹಾಲಿನ ದರ ಹೆಚ್ಚಳ ಮಾಡಿದರು.

ಮದ್ಯಪ್ರಿಯರಿಗೂ ಈಗ ಸಿದ್ದರಾಮಯ್ಯರನ್ನು ನೋಡಿದರೆ ಕರೆಂಟ್‌ ಶಾಕ್‌ ಹೊಡೆಯುತ್ತದೆ ಎಂದು ವ್ಯಂಗ್ಯವಾಡಿದರು. ಗಂಡನ ತಲೆ ಒಡೆದು ಹೆಂಡತಿಗೆ 2,000 ರೂ. ಕೊಡುತ್ತಿದ್ದಾರೆ. ಇದೊಂದು ಮನೆ ಹಾಳು ಸರಕಾರ, ರೈತ ವಿರೋಧಿ ಸರಕಾರ ಎಂದು ಟೀಕಿಸಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next