Advertisement

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

10:59 PM Apr 28, 2024 | Team Udayavani |

ಬೆಂಗಳೂರು: 2004ರಿಂದ 2014ರ ವರೆಗೆ 44,838.59 ಕೋ.ರೂ. ಎನ್‌ಡಿಆರ್‌ಎಫ್ ನಿಧಿ ಕೇಳಿದ್ದ ಕರ್ನಾ ಟಕಕ್ಕೆ ಯುಪಿಎ ಸರಕಾರ ಕೊಟ್ಟಿದ್ದು 4,571.4 ಕೋಟಿ ರೂ. (ಶೇ.8) ಮಾತ್ರ. ಅದೇ 2014ರಿಂದ 2024ರ ವರೆಗೆ ಎನ್‌ಡಿಎ ಸರಕಾರಕ್ಕೆ 25,728 ಕೋ. ರೂ. ಕೇಳಿದರೆ, ಕರ್ನಾಟಕಕ್ಕೆ ಸಿಕ್ಕಿದ್ದು 11,482 ಕೋ. ರೂ. (ಶೇ.44) ಮಾತ್ರ. ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಚಿಪ್ಪು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ, ಕಳೆದ 20 ವರ್ಷಗಳಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಎನ್‌ಡಿಆರ್‌ಎಫ್ ನಿಧಿಯ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು. ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಗೆ ಇಟ್ಟುಕೊಂಡು ಮಾತಾಡುತ್ತಿದ್ದಾ ರೆ. ಈ ಮೊದಲು ಮಾರ್ಗಸೂಚಿ ಪ್ರಕಾರ, 4,860 ಕೋ. ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿದ್ದರು. ಈಗ ಕೇಂದ್ರ ಸರಕಾರ 3,454 ಕೋ. ರೂ. ನೀಡಿದ ಬಳಿಕ 18,172 ಕೋ. ರೂ. ನೀv ‌ಬೇಕೆಂದು ಪ್ರತಿ ಭಟನೆ ಮಾಡುತ್ತಿದ್ದಾ ರೆ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಪರಿಹಾರ ದ್ವಿಗುಣ
2022ರಲ್ಲಿ ಪ್ರವಾಹದಿಂದ 13,09,421 ಹೆಕ್ಟೇರ್‌ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಅವರು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದು, 14,62,481 ರೈತರ ಬ್ಯಾಂಕ್‌ ಖಾತೆಗೆ 3,031.15 ಕೋಟಿ ರೂ.ಗಳ ಇನ್‌ಪುಟ್‌ ಸಬ್ಸಿಡಿ ಕೊಟ್ಟಿದ್ದರು ಎಂದರು.

ದುರುದ್ದೇಶದಿಂದ ಸುಪ್ರೀಂ ಮೊರೆ ರಾಜ್ಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಮುನ್ನವೇ ಬರ ಪರಿಹಾರ ಘೋಷಣೆ ಬಗ್ಗೆ ಕೇಂದ್ರವು ಚುನಾವಣ ಆಯೋಗದ ಅನುಮತಿ ಕೇಳಿತ್ತು. ಕೇಂದ್ರ ಸರಕಾರ ಎನ್‌ಡಿಆರ್‌ಎಫ್ ಬಿಡುಗಡೆ ಮಾಡುವುದು ಗೊತ್ತಿದ್ದೇ ರಾಜ್ಯ ಸರಕಾರ ಕೋರ್ಟ್‌ ಮೆಟ್ಟಿಲೇರಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next