Advertisement

Politics: ಸಿಎಂ ಸಿದ್ದರಾಮಯ್ಯ “ಕಾಮ್‌ ಚೋರ್‌’: ಅಶೋಕ್‌ ಆರೋಪ

08:09 PM May 09, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಸಿಕ್‌ ಲೀವ್‌, ಟೂರ್‌ ಲೀವ್‌ ತೆಗೆದುಕೊಂಡು ಮಜಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ “ಕಾಮ್‌ ಚೋರ್‌’ (ಕೆಲಸಗಳ್ಳ) ಎಂದು ವಿಪಕ್ಷ  ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ  ಜನರಿಗೆ ನೀರಿಲ್ಲ, ಗೋವುಗಳಿಗೆ ಮೇವಿಲ್ಲ. ಆದರೆ ಸಿದ್ದರಾಮಯ್ಯ ಆರಾಮವಾಗಿ ರೆಸಾರ್ಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಬರಕ್ಕೆ ಸ್ಪಂದಿಸಿ ಎಂದು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರಕ್ಕೆ ಉತ್ತರ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ? ರೆಸಾರ್ಟ್‌ಗೆ ಪತ್ರ ಬರೆಯಬೇಕಾದ ಸ್ಥಿತಿ ಇದೆ. ಎಲ್ಲಿಯ ಮೋದಿ, ಎಲ್ಲಿಯ ಕಾಮ್‌ ಚೋರ್‌ ಸಿದ್ದರಾಮಯ್ಯ? ಮೋದಿ ಕಾಯಕ ಯೋಗಿ, ಸಿದ್ದರಾಮಯ್ಯ ಬರೇ ಬೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next