Advertisement

ಚಿಕಿತ್ಸಾ ಆಂದೋಲನಕ್ಕೆ ಚಾಲನೆ

03:03 PM Jul 16, 2019 | Suhan S |

ಕೊಪ್ಪಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ನಡೆದ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.

Advertisement

ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ| ಎಂ.ಜಿ. ಮಹೇಶ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 1,587 ರೋಗಿಗಳನ್ನು ಪತ್ತೆ ಹಚ್ಚಬೇಕಾಗಿದ್ದು, ಈ ವರೆಗೂ 1,262 ಕ್ಷಯರೋಗಿಗಳು ಸರ್ಕಾರಿ ವಲಯದಲ್ಲಿ ಹಾಗೂ 107 ಕ್ಷಯರೋಗಿಗಳನ್ನು ಖಾಸಗಿ ವಲಯದಲ್ಲಿ ಪತ್ತೆ ಮಾಡಲಾಗಿದೆ. ಸುಮಾರು 218 ಪ್ರಕರಣ ತಪ್ಪಿದ ಕ್ಷಯ ಪ್ರಕರಣಗಳಾಗಿದ್ದು, ಅವುಗಳು ದಾಖಲಾಗದೇ ಉಳಿದಿವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯು ತ್ತಿರುವುದು ಕಂಡುಬಂದಿವೆ ಎಂದರು. ಕಾರ್ಯಕ್ರಮದಲ್ಲಿ ಡಾ| ಎಂ.ಜಿ ಮಹೇಶ, ಡಾ| ಲಿಂಗರಾಜು, ಡಾ| ಎಸ್‌.ಕೆ. ದೇಸಾಯಿ, ಡಾ| ಜಂಬಯ್ಯ, ಡಾ| ರಾಮಾಂಜನೇಯ, ಡಾ| ಪ್ರಶಾಂತ ತಟ್ಟಿ, ಡಾ| ಸುಷ್ಮಾ ಸೇರಿದಂತೆ ಆರ್‌ಎನ್‌ಟಿಸಿಪಿ ಸಿಬ್ಬಂದಿ, ಕ್ಷಯರೋಗ ನಿಯಂತ್ರಣ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ಮಾನವ ಸರಪಳಿ ನಿರ್ಮಿಸುವ ಮೂಲಕ ಕ್ಷಯರೋಗ ಕೊನೆಗಾಣಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next