Advertisement

ತೊಗರಿ ಖರೀದಿ ಕೇಂದ್ರ ಆರಂಭಿಸಿ

12:56 PM Jan 14, 2020 | Suhan S |

ಬಸವನಬಾಗೇವಾಡಿ: ತೊಗರಿಗೆ ಬೆಂಬಲ ಬೆಲೆ ಹೆಚ್ಚಳ ಹಾಗೂ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಶ್ರೀಶೈಲ ಹೆಬ್ಟಾಳ ಮಾತನಾಡಿ, 7-8 ವರ್ಷದಿಂದ ತಾಲೂಕಿನಲ್ಲಿ ಬರಗಾಲ ಅವರಿಸಿ ರೈತರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಈ ಬಾರಿ ಅಲ್ಪ-ಸ್ವಲ್ಪ ಮಳೆಯಾಗಿ ರೈತರು ತಕ್ಕ ಮಟ್ಟಿಗೆ ತೊಗರಿ ಬೆಳೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು ಬೆಳೆದ ತೊಗರಿಗೆ ಪ್ರತಿ ಕ್ವಿಂಟಲ್‌ ಗೆ 6,500 ರೂ.ದಿಂದ 7,000 ರೂ. ವರೆಗೆ ಬೆಂಬಲ ಬೆಲೆಯನ್ನು ನಿಗ ದಿ ಮಾಡಬೇಕು ಎಂದು ಆಗ್ರಹಿಸಿದರು.

ಕರವೇ ತಾಲೂಕಾಧ್ಯಕ್ಷ ಮಂಜು ಹಾರಿವಾಳ, ಕುಮಾರ ಅವಟಿ, ಸುರೇಶ ಹಾರಿವಾಳ, ಸಂತೋಷ ಕೂಡಗಿ, ಅಸ್ಪಾಕ ಬಾಗವಾನ, ಭೀಮು ನಿಕ್ಕಂ, ರಾಜು ಹೆಬ್ಟಾಳ, ಪ್ರಭು ಯಂಭತ್ನಾಳ, ಪಂಚಾಕ್ಷರಿ ಸಾರಂಗಮಠ, ಪರಸು ಗಬ್ಬೂರ, ಭೀರೇಶ ಡೋಣೂರ, ಶಂಕ್ರೆಪ್ಪಹಾರಿವಾಳ, ಮಲ್ಲು ಅಂಬಳನೂರ ಸಂತೋಷ ಮಡಿಕೇಶ್ವರ, ಮಲ್ಲುಮದರಿ, ಬಾಲಚಂದ್ರ ಮಾಕೊಂಡ, ಸಂಗು ಹಾರಿವಾಳ, ಬಸು ವಂದಾಲ, ಹಣಮಂತ ಹೊಸಮನಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next