Advertisement
ಅಂದಹಾಗೆ, ನಟ ಕುಮಾರ್ ಬಂಗಾರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಈ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಅಂಚೆ ಚೀಟಿ ರಿಲೀಸ್ ಮಾಡಿದ ಕುಮಾರ್ ಬಂಗಾರಪ್ಪ, “ದೊಡ್ಡರಂಗೇಗೌಡ ಅವರು ನಮ್ಮ “ಅಶ್ವಮೇಧ’ ಚಿತ್ರಕ್ಕೆ “ಹೃದಯ ಸಮುದ್ರ ಕಲಕಿ …’ ಎಂಬ ಹಾಡು ಬರೆದಿದ್ದರು. ಆ ಹಾಡು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಹಾಡಿನ ಮೂಲಕ ಸಿನಿಮಾ ಕೂಡ ಸದ್ದು ಮಾಡಿತು. ಈ ಚಿತ್ರ ಎಲ್ಲರಿಗೂ ಗೆಲುವು ತಂದುಕೊಡಲಿ’ ಎಂದು ಶುಭಹಾರೈಸಿದರು ಕುಮಾರ್ ಬಂಗಾರಪ್ಪ.
ಅರವ್ ಸೂರ್ಯ ಮತ್ತು ಅಕ್ಷರಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಚಿತ್ರವನ್ನು ನೃತ್ಯ
ನಿರ್ದೇಶಕ ಕಪಿಲ್ ನಿರ್ದೇಶಿಸಿದ್ದಾರೆ. ಇಲ್ಲಿ ಡಾ.ದೊಡ್ಡರಂಗೇಗೌಡ ಅವರೂ ನಟಿಸಿದ್ದಾರೆ. ನಿಜ ಜೀವನದ ಪಾತ್ರವನ್ನೇ ನಿರ್ವಹಿಸಿರುವುದು ವಿಶೇಷ. ಅವರ ಹುಟ್ಟೂರು ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ದೊಡ್ಡರಂಗೇಗೌಡರ ಪುತ್ರ ಭರತ್ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ರಾಗರಮಣ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ.