Advertisement

ಕಿರಿಕಿರಿಯಾಗುತ್ತದೆಂದು ಆಟವಾಡುತ್ತಿದ್ದ ಮಕ್ಕಳಿಗೆ ಚೂರಿ ಇರಿತ: ಆರೋಪಿ ಬಂಧನ

01:49 AM May 06, 2019 | sudhir |

ಮಂಗಳೂರು : ಕಿರಿಕಿರಿ ಯಾಗುತ್ತಿದೆ ಎಂದು ಆಟವಾಡುತ್ತಿದ್ದ ಮಕ್ಕಳಿಗೆ ನೆರಮನೆಯ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಶಕ್ತಿನಗರದ ಪ್ರೀತಿ ನಗರದಲ್ಲಿ ಶನಿವಾರ ನಡೆದಿದೆ.

Advertisement

ಆರೋಪಿ ಶಕ್ತಿನಗರ ನಿವಾಸಿ ದೇವರಾಜು ಅಲಿಯಾಸ್‌ ಅಣ್ಣು (40) ಎಂಬಾ ತನನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ಗಾಯ ಗೊಂಡಿರುವ ಹಾರ್ದಿಕ್‌ (4) ಮತ್ತು ಚಿರಾಗ್‌ (9) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲೆಗೆ ರಜೆ ಇರುವ ಕಾರಣ ಸಹೋದರರಾದ ಹಾರ್ದಿಕ್‌ ಮತ್ತು ಚಿರಾಗ್‌ ಸ್ನೇಹಿತರೊಂದಿಗೆ ಮನೆಯ ಎದುರು ಆಡುತ್ತಿದ್ದರು. ಆಗ ತನಗೆ ಕಿರಿಕಿರಿಯಾಗುತ್ತಿದೆ ಎಂದು ಹೇಳಿ ದೇವರಾಜು ಚೂರಿ ಹಿಡಿದುಕೊಂಡು ಮಕ್ಕಳ ಮೇಲೆ ಹಲ್ಲೆಗೆ ಮುಂದಾದ. ಆಗ ಕೆಲವು ಮಕ್ಕಳು ಓಡಿ ಹೋದರು. ಈ ಸಂದರ್ಭ ಕೈಗೆ ಸಿಕ್ಕ ಹಾರ್ದಿಕ್‌, ಚಿರಾಗ್‌ಗೆ ಆರೋಪಿ ಚೂರಿಯಿಂದ ಇರಿದಿದ್ದು, ಮಕ್ಕಳ ಕೈ, ತಲೆ ಹಾಗೂ ಮುಖಕ್ಕೆ ಗಾಯವಾಗಿದೆ.

ಬೊಬ್ಬೆ ಧಾವಿಸಿ ಬಂದ ಪೋಷಕರು ಹಾಗೂ ಸ್ಥಳೀಯರು ಕೂಡಲೇ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು ರವಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next