Advertisement

ಮದ್ವೆ ಕಾರ್ಡ್‌ ಕೊಡಲು ಬಂದವ ದಂಪತಿಗೆ ಇರಿದು ದರೋಡೆಗೈದ!

10:20 AM Feb 01, 2018 | Team Udayavani |

ಹಾಸನ: ಅಣ್ಣನ ಮದುವೆಗೆಂದು ಆಮಂತ್ರಣ ಪತ್ರಿಕೆ ನೀಡಲು ಬಂದವ ದಂಪತಿಗೆ ಚೂರಿಯಿಂದ ಇರಿದು 3 ಲಕ್ಷ ರೂಪಾಯಿಗೂ ಹೆಚ್ಚು ನಗ, ನಗದನ್ನು ದೋಚಿ ಪರಾರಿಯಾದ ಕಳವಳಕಾರಿ ಘಟನೆ ಬುಧವಾರ ರಾತ್ರಿ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ. 

Advertisement

ಇಮ್ರಾನ್‌ ಎಂಬಾತ ತಾನು ಕೆಲಸಕ್ಕೆ ಬರುತ್ತಿದ್ದ ಮನೆಯ ಮಾಲೀಕರಾದ ವಾಗೀಶ್‌ (61) ಮತ್ತು ಸಾವಿತ್ರಿ (55) ಎನ್ನುವವರ ಮನೆಗೆ ಬಂದು ಅಣ್ಣನ ಮದುವೆ ಆಮಂತ್ರಣವನ್ನು ನೀಡಿ ಕಾಫಿಯನ್ನೂ ಸೇವಿಸಿದ್ದಾನೆ. ಬಳಿಕ ದಂಪತಿಗೆ ಇರಿದು 3 ಲಕ್ಷ ರೂಪಾಯಿ ಹಣ ಮತ್ತು ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದಾನೆ. 

ವಾಗೀಶ್‌ ಅವರ ಮುಖದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸಾವಿತ್ರಿ ಅವರ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು ಅವರನ್ನು ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕುವೆಂಪು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಇಮ್ರಾನ್‌ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next