Advertisement

ಅತ್ತೂರು: ನವದಿನ ಪ್ರಾರ್ಥನಾ ವಿಧಿ ಆರಂಭ

12:30 AM Jan 21, 2019 | |

ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್‌ ಬಸಿಲಿಕಾ ಅಪಾರ ಸಂಖ್ಯೆಯ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ದುಃಖ ದುಮ್ಮಾನಗಳಿಗೆ ಪರಿಹಾರ ಕಲ್ಪಿಸುವ ತಾಣವಾಗಿದೆ. ಇಲ್ಲಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇನ್ನಷ್ಟು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅತ್ತೂರು ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ)ದ  ಪೂರ್ವಭಾವಿಯಾಗಿ ನವದಿನಗಳ ಪ್ರಾರ್ಥನಾ ವಿಧಿ (ನೊವೆನಾ)ಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಮಾತನಾಡಿ, ಅತ್ತೂರು ನಮ್ಮ ನಾಡಿನ ಹೆಮ್ಮೆಯ ಭಾವೈಕ್ಯ ಕೇಂದ್ರ. ಇಲ್ಲಿ 5 ದಿನ ನಡೆಯುವ ವಾರ್ಷಿಕ ಮಹೋತ್ಸವ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆಯ ಕೆಲಸಗಳನ್ನು ನಡೆಸಲಿ ಎಂದರು.

ನವ ದಿನ ಪ್ರಾರ್ಥನಾ ಮುಹೂರ್ತ, ವಿಶೇಷ ಬಲಿಪೂಜೆ ನಡೆಯಿತು. ಚರ್ಚ್‌ನ ಧರ್ಮಗುರು ವಂ| ಜಾರ್ಜ್‌ ಡಿ’ಸೋಜಾ, ಸಹಾಯಕ ಧರ್ಮಗುರು ಜೆನ್ಸಿಲ್‌ ಆಳ್ವ, ನಕ್ರೆ ಅಂತೋನಿ ಡಿ’ಸೋಜಾ, ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ ಇನ್ನಾ, ತಾ.ಪಂ.ಸದಸ್ಯ ಹರಿಶ್ಚಂದ್ರ, ನಿಟ್ಟೆ ಗ್ರಾ.ಪಂ. ಅಧ್ಯಕ್ಷೆ ಸಬಿತಾ ಪೂಜಾರ್ತಿ ಉಪಸ್ಥಿತರಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಜಾನ್‌ ಡಿ’ಸಿಲ್ವ ಸ್ವಾಗತಿಸಿ, ರಿಚಾರ್ಡ್‌ ಪಿಂಟೋ ನಿರೂಪಿಸಿದರು. ಕಾರ್ಯದರ್ಶಿ ಲೀನಾ ಡಿ’ಸಿಲ್ವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next