Advertisement

ಶ್ರೀರಂಗಪಟ್ಟಣ: ಮಳೆಗೆ ಕುಸಿದ ಮನೆ: ತಪ್ಪಿದ ಭಾರಿ ದುರಂತ

11:07 AM Nov 18, 2021 | Team Udayavani |

ಶ್ರೀರಂಗಪಟ್ಟಣ: ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶ್ರೀರಂಗಪಟ್ಟಣ ಟೌನ್ ಗಂಜಾಮ್ ನಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

Advertisement

ಮನೆ ಕುಸಿಯುವ ವೇಳೆ ಉಂಟಾದ ಶಬ್ದಕ್ಕೆ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಸೇರಿ ದಂಪತಿಗಳು ಹೊರಗೆ ಓಡಿ ಬಂದಿದ್ದರಿಂದ ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಕೆಆರ್‍ಎಸ್ ಸಂಪೂರ್ಣ ಭರ್ತಿ: ನಿಮಿಷಾಂಭ ದೇಗುಲದ ಬಳಿ‌ ನದಿಗೆ ಭಕ್ತರ ಪ್ರವೇಶ ನಿರ್ಬಂಧ

ಗಂಜಾಮ್ ನ ಗುಂಬಸ್ ರಸ್ತೆಯ ಮಚ್ಚಿಬಜಾರ್ ಬೀದಿಲ್ಲಿರುವ  ಸೈಯದ್ ನಾಸೀರ್ ಎಂಬುವರ ಮನೆ ರಾತ್ರಿ ಮಳೆಗೆ ಕುಸಿದು ಬಿದಿದ್ದು, ಮನೆಯಲ್ಲಿದ್ದ ಪಾತ್ರೆಗಳು ಸೇರಿದಂತೆ ಆಹಾರ ಪದಾರ್ಥ ಮನೆಯಲ್ಲಿ ನೆಲಸಮವಾಗಿದ್ದು, ಇದೀಗ ಮನೆ ಇಲ್ಲದೆ ಈ ಕುಟುಂಬ ಕಂಗಾಲಾಗಿದೆ.ಈ ಕುಟುಂಬ ಇದೀಗ  ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next